Advertisement

ಬಾಬು ಜಗಜೀವನ್ ರಾಮ್ ವೃತ್ತದ ಗೇಟ್ ಧ್ವಂಸ: ಆಕ್ರೋಶ

01:57 PM Oct 30, 2020 | keerthan |

ಕೊಪ್ಪಳ: ನಗರದ ಜಿಲ್ಲಾ ಆಸ್ಪತ್ರೆಯ ಮುಂಭಾಗದಲ್ಲಿರುವ ಡಾ.ಬಾಬು ಜಗಜೀವನರಾಂ ಅವರ ವೃತ್ತದ ಗೇಟ್ ಮುರಿದ ಪ್ರಕರಣ ಶುಕ್ರವಾರ ಬೆಳಗ್ಗೆ ನಡೆದಿದೆ.

Advertisement

ಆದರೆ ಪರಿಶಿಷ್ಟ ವರ್ಗದ ಮುಖಂಡರು ಇದನ್ನು ಉದ್ದೇಶ ಪೂರ್ವಕವಾಗಿ ಗೇಟ್ ಮುರಿಯಲಾಗಿದೆ. ಮೊದಲಿಂದಲೂ ಈ ವೃತ್ತವನ್ನ ತೆರವು ಮಾಡುವ ಪ್ರಯತ್ನ ನಡೆದಿದ್ದವು. ಈ ಹಿಂದೆ ನಾವು ಹೋರಾಟ ಮಾಡಿ ವೃತ್ತವನ್ನು ಉಳಿಸಿದ್ದೆವು. ಈಗ ಅಲ್ಲಿನ ಕೆಲವರು ಉದ್ದೇಶ ಪೂರ್ವಕ ಈ ಕೃತ್ಯ ಎಸಗಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೇಟ್ ಧ್ವಂಸ ಬೆನ್ನಲ್ಲೆ ಸ್ಥಳಕ್ಕೆ ಕೊಪ್ಪಳ ನಗರ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು. ಈ ಕುರಿತು ಪ್ರತಿಭಟನೆ ನಡೆಸಲಾಗುವುದು ಎಂದು ಪರಿಶಿಷ್ಟ ವರ್ಗದ ಮುಖಂಡ ಹನುಮೇಶ ಕಡೆಮನಿ ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next