Advertisement

Chikkamagalur: ಬಾಬಾಬುಡನ್‌ಗಿರಿ ದರ್ಗಾ: ಹೊಸ ಆಚರಣೆಗಿಲ್ಲ ಅವಕಾಶ

11:32 PM Jan 18, 2024 | Pranav MS |

ಚಿಕ್ಕಮಗಳೂರು: ಹೊಸ ಆಚರಣೆಗೆ ಅವಕಾಶವಿಲ್ಲವೆಂದು ನ್ಯಾಯಾಲಯದ ಆದೇಶವಿದ್ದರೂ ಇನಾಂ ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದಲ್ಲಿ ಹೊಸ ಆಚರಣೆಗಳಿಗೆ ಅನುಮತಿಯ ಕೋರಿಕೆ ಬರುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವು ಸೃಷ್ಟಿಸಿದೆ. ಶಾಖಾದ್ರಿ ವಂಶಸ್ಥ ಅಜ್ಜತ್‌ ಪಾಷ, ಇಸ್ಲಾಮಿಕ್‌ ಕ್ಯಾಲೆಂಡರ್‌ ಪ್ರಕಾರ ಜ.17ರಂದು ಗರ್ಭಗುಡಿಯಲ್ಲಿ ಅರೇಬಿಕ್‌ ಶ್ಲೋಕ(ಫಾತಿಹ) ಹೇಳಲು ಅನುಮತಿ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ವಿಶೇಷ ಪ್ರಾರ್ಥನೆ ಸಲ್ಲಿಸಲು ಇನಾಂ ದತ್ತಾತ್ರೇಯ ಪೀಠಕ್ಕೆ ಆಗಮಿಸಿದ್ದರು.

Advertisement

ಆದರೆ ಜಿಲ್ಲಾಡಳಿತ ಅವಕಾಶ ಕೊಡದೆ ವಾಪಸ್‌ ಕಳಿಸಿದೆ. ಈ ಹಿನ್ನೆಲೆಯಲ್ಲಿ ಇನಾಂ ದತ್ತಾತ್ರೇಯ ಬಾಬಾಬುಡನ್‌ಗಿರಿ ದರ್ಗಾ ಸುತ್ತಮುತ್ತ 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಖುದ್ದು ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ಬಂದೋಬಸ್ತ್ ನೇತೃತ್ವ ವಹಿಸಿದ್ದರು. ಇನ್ನೊಂದೆಡೆ ಇದೇ ದಿನ ಹಿಂದೂಪರ ಸಂಘಟನೆಯವರು ದತ್ತಪೀಠದಲ್ಲಿ ವಿಶೇಷ ಪೂಜೆ ಸಲ್ಲಿಸಲು ಅನುಮತಿ ಕೋರಿದ್ದರು. ಜಿಲ್ಲಾಡಳಿತ ಅದಕ್ಕೂ ಅವಕಾಶ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next