Advertisement

ನನ್ನ ದೇಹದಲ್ಲಿ ಸಿಂಹದ ರಕ್ತ ಹರಿಯುತ್ತಿದೆ… ಬೆದರಿಕೆಗೆ ಹೆದರಲ್ಲ: ಬಾಬಾ ಸಿದ್ದಿಕಿ ಪುತ್ರ

02:13 PM Oct 21, 2024 | Team Udayavani |

ಮುಂಬೈ: ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ ಮುಂಬೈ ಯಲ್ಲಿ ಸಂಚಲನ ಮೂಡಿಸಿದ್ದು ಮಾತ್ರವಲ್ಲದೆ ಇಡೀ ಬಾಲಿವುಡ್ ಜಗತ್ತು ಶಾಕ್ ನಲ್ಲಿ ಮುಳುಗಿದೆ. ಸಿದ್ದಿಕಿ ಹತ್ಯೆಯ ಬಳಿಕ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆಯಾದರೂ ನಿರಂತರ ಬೆದರಿಕೆಗಳು ಮಾತ್ರ ಬರುತ್ತಿವೆ. ಈ ನಡುವೆ ಬಾಬಾ ಸಿದ್ದಿಕಿ ಅವರ ಮಗ ಜೀಶಾನ್ ಸಿದ್ದಿಕಿ ಅವರಿಗೂ ಕೊಲೆ ಬೆದರಿಕೆಗಳು ಬರುತ್ತಿವೆ ಎನ್ನಲಾಗಿದೆ.

Advertisement

ಈ ಬಗ್ಗೆ ಜೀಶನ್ ಸಿದ್ದಿಕಿ ಟ್ವೀಟ್ ಮಾಡಿದ್ದು ತಂದೆಯ ಹತ್ಯೆ ಬಳಿಕ ಹಂತಕರು ನನ್ನ ಮೇಲೆ ಕಣ್ಣಿಟ್ಟಿದ್ದಾರೆ ಆದರೆ ನಾನು ಯಾವುದಕ್ಕೂ ಹೆದರುವವನಲ್ಲ, ನನ್ನ ತಂದೆ ನ್ಯಾಯಕ್ಕಾಗಿ, ಸಮಾಜದಲ್ಲಿ ಬದಲಾವಣೆ ತರಲು ಹೋರಾಡಿದವರು ಜೊತೆಗೆ ಧೈರ್ಯದಿಂದ ಕಷ್ಟಗಳನ್ನು ಎದುರಿಸಿದವರು ಹಾಗಾಗಿ ನಾನು ಅವರ ಮಾರ್ಗದಲ್ಲೇ ಮುಂದುವರೆಯುತ್ತೇನೆ ಯಾವುದೇ ಕಾರಣಕ್ಕೂ ಜೀವ ಬೆದರಿಕೆಗಳಿಗೆ ಹೆದರುವವನಲ್ಲ, ನನ್ನ ದೇಹದಲ್ಲಿ ಸಿಂಹದ ರಕ್ತ ಹರಿಯುತ್ತಿದೆ ಹಾಗಾಗಿ ತಂದೆಯ ಮಾರ್ಗದಲ್ಲೇ ಸಾಗಿ ಅವರ ಕರ್ತವ್ಯಗಳನ್ನು ನಾನು ಮುಂದುವರೆಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಅಕ್ಟೋಬರ್ 12 ರಂದು ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ಜೀಶನ್ ಸಿದ್ದಿಕ್ ಅವರ ಕಚೇರಿ ಬಳಿ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರನ್ನು ಮೂವರು ಅಪರಿಚಿತ ವ್ಯಕ್ತಿಗಳು ಹತ್ಯೆಗೈದಿದ್ದರು, ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿ ಸುಮಾರು ಹತ್ತು ಮಂದಿಯನ್ನು ಬಂಧಿಸಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next