Advertisement

B.Y. Vijayendra: ಮುಡಾ ದಾಖಲೆ ನೀಡಲು ರಮೇಶ್‌ ಬಾಬು ಯತ್ನ

01:17 AM Jul 15, 2024 | Team Udayavani |

ಬೆಂಗಳೂರು: ದೇವೇಗೌಡರ ಕುಟುಂಬಕ್ಕೆ ಮುಡಾದಲ್ಲಿ ಅಕ್ರಮವಾಗಿ 48 ನಿವೇಶನಗಳು ಹಂಚಿಕೆಯಾಗಿದ್ದು ಈ ಸಂಬಂಧ ತನಿಖೆ ಮಾಡುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ 2011ರ ಮಾರ್ಚ್‌ 17ರಂದು ವಿಧಾನ ಸಭೆಯಲ್ಲಿ ಪ್ರಸ್ತಾವಿಸಿದ ದಾಖಲೆಗಳನ್ನು ಅವರ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ನೀಡಿ ಸದನದಲ್ಲಿ ಈ ಬಗ್ಗೆ ವಿಚಾರ ಪ್ರಸ್ತಾವಿಸುವಂತೆ ಮನವಿ ಮಾಡಲು ಕೆಪಿಸಿಸಿಯ ಮಾಧ್ಯಮ ಮತ್ತು ಸಂವಹನ ಘಟಕದ ಅಧ್ಯಕ್ಷ ರಮೇಶ್‌ ಬಾಬು ವಿಜಯೇಂದ್ರ ಅವರ ಭೇಟಿಗೆ ಪ್ರಯತ್ನಿಸಿದರು.

Advertisement

ರವಿವಾರ ವಿಜಯೇಂದ್ರ ಅವರ ಶಿವಾನಂದ ವೃತ್ತದ ಬಳಿಯಿರುವ ಮನೆಗೆ ತೆರಳಿ ದಾಖಲೆಗಳನ್ನು ನೀಡಲು ರಮೇಶ್‌ ಮುಂದಾಗಿದ್ದರು. ಆದರೆ ಈ ಬಗ್ಗೆಗಿನ ಮಾಹಿತಿ ಮೊದಲೇ ಪಡೆದಿದ್ದ ಪೊಲೀಸರು ಅವರನ್ನು ಆ ರಸ್ತೆಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ.

ಬಳಿಕ ರಮೇಶ್‌ ಬಾಬು ಮಾಧ್ಯಮಗಳ ಜತೆ ಮಾತನಾಡಿ, ವಿಜಯೇಂದ್ರ ಅವರ ನಿವಾಸದಲ್ಲಿ ಇಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಹಾಗೆಯೇ ದಾಖಲೆಗಳನ್ನು ನಮಗೆ ನೀಡಿ ನಾವು ಅವರಿಗೆ ತಲುಪಿಸುತ್ತೇವೆ ಎಂದಿದ್ದಾರೆ. ನಾನು ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next