Advertisement

ನೀವು ಬೀದಿ ಸುತ್ತಿ ಪೊಲೀಸರು ಕ್ರಮಕೈಗೊಂಡರೆ ನನ್ನನ್ನು ದೂರಬೇಡಿ: ಬಿಎಸ್ ವೈ ಎಚ್ಚರಿಕೆ

11:11 AM Mar 27, 2020 | keerthan |

ಬೆಂಗಳೂರು: ಕರ್ನಾಟಕ ಲಾಕ್ ಡೌನ್ ಆದೇಶವಿದ್ದರೂ ಜನರು ನಿಯಮಗಳನ್ನು ಗಾಳಿಗೆ ತೂರಿರುವುದನ್ನು ಕಂಡು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಬೈಕ್ ಗಳಲ್ಲಿ, ಕಾರುಗಳಲ್ಲಿ ರಸ್ತೆಯಲ್ಲಿ ಸಂಚರಿಸುವುದು ಕಂಡು ಬಂದರೆ ಪೊಲೀಸರು ಕ್ರಮಕೈಗೊಂಡರೆ ನನ್ನನ್ನು ದೂರಬೇಡಿ ಎಂದು ಎಚ್ಚರಿಸಿದ್ದಾರೆ.

Advertisement

ಬೆಂಗಳೂರಿನಲ್ಲಿಂದು ಪತ್ರಕರ್ತರ ಜೊತೆ ಮಾತನಾಡಿದ ಅವರು, ಜನರು ಅನಗತ್ಯವಾಗಿ ಮನೆಯಿಂದ ಹೊರಬರಬೇಡಿ. ಎಂಟು ದಿನಗಳ ಕಾಲ ಸಹಕಾರ ನೀಡಿ ಎಂದು ಮನವಿ ಮಾಡಿದರು.

ಬೆಂಗಳೂರಿನ ಬಡವರಿಗೆ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟ ನೀಡಲಾಗುವುದು ಎಂದು ಸೋಮವಾರ ಸರಕಾರ ತಿಳಿಸಿತ್ತು. ಆದರೆ ಇಂದು ಆ ಉಚಿತ ಉಟ ವ್ಯವಸ್ಥೆಯನ್ನು ರದ್ದುಗೊಳಿಸಿದ ಬಿಎಸ್ ವೈ ಜನರು ಗುಂಪಾಗಿ ಸೇರುವ ಕಾರಣ ಇಂದಿರಾ ಕ್ಯಾಂಟೀನ್ ಮುಚ್ಚಲಾಗುವುದು ಎಂದರು.

ಹೊಟೇಲ್ ಗಳಿಂದ ಮನೆಗೆ ಪಾರ್ಸೆಲ್ ತರಿಸಿಕೊಳ್ಳಿ. ಒಂದು ವೇಳೆ ಹೊಟೇಲಿಗರು ದುಬಾರಿ ಹಣ ಪಡೆಯುವುದು ಕಂಡುಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಎಸ್ ವೈ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next