Advertisement

ಬೆಂ. ಸೆಂಟ್ರಲ್‌ನಲ್ಲಿ ಪ್ರಕಾಶ್‌ ರೈಗೂ ಬೆಂಬಲವಿಲ್ಲ

12:30 AM Feb 19, 2019 | Team Udayavani |

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾಗಿರುವ ಚಲನಚಿತ್ರ ನಟ ಪ್ರಕಾಶ್‌ ರೈ
ಅವರನ್ನು ಬೆಂಬಲಿಸದಿರಲು ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. 

Advertisement

ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿರುವ ಪ್ರಕಾಶ್‌ ರೈ ಬಿಜೆಪಿಯನ್ನು ಸೋಲಿಸಲು ತಮಗೆ ಬೆಂಬಲ ಸೂಚಿಸುವಂತೆ
ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಆದರೆ, ಯಾವುದೇ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡದಿರಲು ಕಾಂಗ್ರೆಸ್‌ ನಿರ್ಧರಿಸಿದೆ.

ಈ ಕ್ಷೇತ್ರದಲ್ಲಿ ಶಾಸಕ ರೋಷನ್‌ಬೇಗ್‌, ಪರಿಷತ್‌ ಸದಸ್ಯ ರಿಜ್ವಾನ್‌ ಹರ್ಷದ್‌ ಹಾಗೂ ಸಲೀಂ ಆಹಮದ್‌ ಜತೆಗೆ ರಾಜ್ಯಸಭೆ ಸದಸ್ಯ ಹರಿಪ್ರಸಾದ್‌ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next