Advertisement

Congress ಸೇರಿದ ಬಿ. ಸೋಮಶೇಖರ್‌

11:52 PM Apr 20, 2023 | Team Udayavani |

ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿ ಪಕ್ಷಾಂತರ ಪರ್ವ ಮತ್ತಷ್ಟು ಜೋರಾಗಿದೆ. ಗುರುವಾರ ಮಾಜಿ ಸಚಿವ ಬಿ.ಸೋಮಶೇಖರ್‌, ವಕ್ಫ್ ಮಂಡಳಿ ಅಧ್ಯಕ್ಷ ಆಸಿಫ್ ಸೇs…, ಮೂಡ ಅಧ್ಯಕ್ಷ ಬಸವೇಗೌಡ, ದಲಿತ ಸಂಘರ್ಷ ಸಮಿತಿ ಐಕ್ಯ ಹೋರಾಟದ ಇಂದೂಧರ ಹೊನ್ನಾಪುರ ಸಹಿತ ಹಲವು ನಾಯಕರು ಕಾಂಗ್ರೆಸ್‌ ಸೇರಿದರು.
ಈ ನಾಯಕರಲ್ಲಿ ಬಹುತೇಕರು ಬಿಜೆಪಿಯಲ್ಲಿದ್ದರೆ, ಹಲವರು ಜೆಡಿಎಸ್‌ನಲ್ಲಿದ್ದರು. ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಬರಮಾಡಿಕೊಂಡರು.

Advertisement

ಈ ಸಂದರ್ಭ ಡಿ.ಕೆ.ಶಿವಕುಮಾರ್‌ ಮಾತನಾಡಿ, ಪ್ರಭಾವಿ ನಾಯಕ ಹಾಗೂ ರಾಜ್ಯಾದ್ಯಂತ ಅಭಿಮಾನಿ ಬಳಗವನ್ನು ಹೊಂದಿರುವ ಮಾಜಿ ಸಚಿವ ಬಿ. ಸೋಮಶೇಖರ್‌ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದಾರೆ. ಅವರ ಆಗಮನದಿಂದ ಪಕ್ಷಕ್ಕೆ ಬಲ ಬಂದಿದೆ. ಅವರು ಬರೀ ಮಳವಳ್ಳಿಗೆ ನಾಯಕರಲ್ಲ; ಅವರಿಗೆ ರಾಜ್ಯದ ಉದ್ದಗಲದಲ್ಲೂ ಅಭಿಮಾನಿಗಳಿರುವುದರಿಂದ ಪಕ್ಷಕ್ಕೆ ನೆರವಾಗಲಿದೆ. ವಕ್ಫ್ ಮಂಡಳಿ ಅಧ್ಯಕ್ಷರಾಗಿದ್ದ ಆಸಿಫ್ ಸೇs… ಕೂಡ ನಮ್ಮ ಪಕ್ಷವನ್ನು ಸೇರಿದ್ದಾರೆ. ಅವರ ಜತೆಗೆ ಅನೇಕ ಅಲ್ಪಸಂಖ್ಯಾಕ ನಾಯಕರು ಮತ್ತು ಬೆಂಬಲಿಗರು ನಮ್ಮ ಕಡೆಗೆ ಬಂದಿದ್ದಾರೆ. ಇದು ರಾಜ್ಯದಲ್ಲಿ ಕಾಂಗ್ರೆಸ್‌ ಪರವಾದ ಅಲೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಕಾಯ್ದೆ ಹಿಂಪಡೆಯುವ ಷರತ್ತು
ಇದೇ ವೇಳೆ ಮಾತನಾಡಿದ ಇಂದೂಧರ ಹೊನ್ನಾಪುರ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಿಜೆಪಿ ಆಡಳಿತದಲ್ಲಿ ಕೈಗೊಂಡ ಗೋಹತ್ಯೆ ನಿಷೇಧ, ಮತಾಂತರ ನಿಷೇಧ, ರೈತ ವಿರೋಧಿ ಕಾನೂನು ಸಹಿತ ಕೆಲವು ಸಂವಿಧಾನ ವಿರೋಧಿ ಕಾಯ್ದೆ-ಕಾನೂನುಗಳನ್ನು ಹಿಂಪಡೆಯಬೇಕು ಎಂಬ ಷರತ್ತಿನೊಂದಿಗೆ ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಬೆಂಬಲ ಘೋಷಿಸಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next