Advertisement

ಅಯ್ಯಪ್ಪಸ್ವಾಮಿಗೆ ಅಭಿಷೇಕ ಮಾಡಿದ ಕಕರಸಾ ಸಂಸ್ಥೆ ಅಧ್ಯಕ್ಷ ರಾಜಕುಮಾರ ತೇಲ್ಕೂರ

11:32 AM Jan 09, 2022 | Team Udayavani |

ಸೇಡಂ: ಪಟ್ಟಣದ ಶ್ರೀ ಲಕ್ಷ್ಮೀನಾರಾಯಣ ಮಂದಿರದ ಶ್ರೀ ಮಣಿಕಂಠ ಆಶ್ರಮದಲ್ಲಿ ನಡೆದ ಅಯ್ಯಪ್ಪಸ್ವಾಮಿಯ  28ನೇ ಪಡಿಪೂಜಾ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ ಅವರು ಪಾಲ್ಗೊಂಡಿದ್ದರು.

Advertisement

ಈ ವೇಳೆ ನಡೆದ ಅಭಿಷೇಕದ ವೇಳೆ ತಾವೇ ಖುದ್ದಾಗಿ ಅಯ್ಯಪ್ಪಸ್ವಾಮಿಯ ಮೂರ್ತಿಗೆ ವಿವಿಧ ಬಗೆಯ ಫಲ, ಪುಷ್ಪಾಭಿಷೇಕ ಮಾಡುವ ಮೂಲಕ ಭಕ್ತಿ ಭಾವ ಮೆರೆದರು.

ಅಲ್ಲದೆ ಇಡೀ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಅಯ್ಯಪ್ಪ ಮಾಲಾಧಾರಿಗಳೊಂದಿಗೆ ಅಯ್ಯಪ್ಪ ಜಪಗೈದರು.

ಗುರುಸ್ವಾಮಿಗಳಾದ ದೇವು ಸುಣಗಾರಸ್ವಾಮಿ, ಮಲ್ಲಿಕಾರ್ಜುನ ಭೋವಿಸ್ವಾಮಿ, ರಂಗಸ್ವಾಮಿ ಹಾಗೂ ಬಿಜೆಪಿ ಯುವ ಮುಖಂಡರಾದ ವೆಂಕಟೇಶ ಪಾಟೀಲ, ರಾಜು ತಳವಾರ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next