Advertisement

ಅಯ್ಯಪ್ಪ ಸ್ವಾಮಿ ದೇವಸ್ಥಾನ ಕಾತ್ರಜ್‌ ಪುಣೆ ಯೋಗ ಶಿಬಿರ, ಸಮ್ಮಾನ

05:10 PM Jun 24, 2018 | Team Udayavani |

ಪುಣೆ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪುಣೆಯ  ಕಾತ್ರಜ್‌ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ  ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ  ಆಯೋಜಕತ್ವದಲ್ಲಿ   ಜೂ.  21 ರಂದು ಬೆಳಗ್ಗೆ 8 ರಿಂದ ಯೋಗ ಶಿಬಿರವನ್ನು ಆಯೋಜಿಸಲಾಗಿತ್ತು.

Advertisement

ಈ ಸಂದರ್ಭದಲ್ಲಿ 2017-2018 ನೇ ಶೈಕ್ಷಣಿಕ ಎಚ್‌ಎಸ್‌ಸಿ ಮತ್ತು ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಶೇ. 80 ಕ್ಕಿಂತ ಅಧಿಕ ಅಂಕಗಳನ್ನು ಪಡೆದ  ಪುಣೆಯ ತುಳು ಕನ್ನಡಿಗ ವಿದ್ಯಾರ್ಥಿಗಳನ್ನು ದೇವಸ್ಥಾನದ  ವತಿಯಿಂದ ಸಮ್ಮಾನಿಸಲಾಯಿತು.    ಕಾತ್ರಜ್‌  ಶ್ರೀ ಅಯ್ಯಪ್ಪ ಸ್ವಾಮಿ  ಸೇವಾ ಸಂಘದ   ವಿಶ್ವಸ್ತ ಮಂಡಳಿಯ   ಅಧ್ಯಕ್ಷ  ಸುಭಾಷ್‌ ಶೆಟ್ಟಿ, ಸ್ಥಾಪಕಾಧ್ಯಕ್ಷ, ಕಾರ್ಯದರ್ಶಿ ರಘುರಾಮ್‌ ರೈ, ಕೋಶಾಧಿಕಾರಿ ಜಗದೀಶ್‌ ಶೆಟ್ಟಿ, ಉಪಾಧ್ಯಕ್ಷ  ಸುಧಾಕರ್‌ ಶೆಟ್ಟಿ, ಮಾಜಿ ಅಧ್ಯಕ್ಷ  ಶೇಖರ್‌  ಟಿ. ಪೂಜಾರಿ,  ಜೊತೆ ಕಾರ್ಯದರ್ಶಿ ಸಚ್ಚಿದಾನಂದ ಶೆಟ್ಟಿ, ಜೊತೆ ಕೋಶಾಧಿಕಾರಿ ಬಾಲಕೃಷ್ಣ ಗೌಡ, ವಿಶ್ವಸ್ತ ಭಾಸ್ಕರ್‌ ಶೆಟ್ಟಿ,  ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ  ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಪುಷ್ಪರಾಜ್‌ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ವಿನೋದಾ ಶೆಟ್ಟಿ ಮತ್ತು ಪದಾಧಿಕಾರಿಗಳು    ಅರ್ಹ ವಿದ್ಯಾರ್ಥಿಗಳಿಗೆ ಶಾಲು, ಪುಷ್ಪಗುತ್ಛ, ಸ್ಮರಣಿಕೆ ಹಾಗೂ ಆಶೀರ್ವಾದ ಹೊಟೇಲ್‌ನ ಮಾಲಕ ಮಾಧವ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಕೊಡಮಾಡುವ   ಪ್ರೋತ್ಸಾಹ ಧನವನ್ನು ನೀಡಿ ಸಮ್ಮಾನಿಸಿ ಗೌರವಿಸಿದರು.

ಪುಣೆಯ ವಿವಿಧ  ಹೈಸ್ಕೂಲ್‌ ಮತ್ತು ಕಾಲೇಜು ಗಳ  ವಿದ್ಯಾರ್ಥಿಗಳಾದ ನಿಧಿ ಜೆ. ಶೆಟ್ಟಿ, ಪ್ರಥ್ವಿ ಬಿ. ಕೊಟ್ಟಾರಿ, ವಿಂಧ್ಯಾ ಪಿ. ಗೌಡ ,     ಸಂವೇದ್‌ ಎಸ್‌. ಶೆಟ್ಟಿ, ತ್ರಿಜûಾ ಗೌಡ, ಹರ್ಷ್‌ ಎಸ್‌. ಕೋಟ್ಯಾನ್‌, ಕೌಶಿಕ್‌ ಎಸ್‌. ಪೂಜಾರಿ, ಸ್ನೇಹಾ ಎಸ್‌. ಸಫಲಿಗ, ಅಸ್ಮಿತಾ ಎಸ್‌. ಸಾಲ್ಯಾನ್‌, ದೀಪಕ್‌ ಆರ್‌. ಮೂಲ್ಯ, ಸೌಜನ್ಯಾ ಜೆ. ಪೂಜಾರಿ, ಪಾರ್ಥ್ ಎಸ್‌. ಶೆಟ್ಟಿ, ಹೃದಯ್‌ ಅರ್‌. ಶೆಟ್ಟಿ, ಶ್ವೇತಾ ಮೂಲ್ಯ, ಅಕಾಂಕ್ಷ ದೇವಾಡಿಗ, ವೈಷ್ಣವಿ ಎಸ್‌. ಹೆಗ್ಡೆ, ದೇವಿಕಾ ಡಿ. ರಾವ್‌ ಮೊದಲಾದವರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಸಮ್ಮಾನಿಸಲಾಯಿತು.

ಪ್ರಾರಂಭದಲ್ಲಿ  ಯೋಗ ದಿನ ಆಚರಣೆಯ ಅಂಗವಾಗಿ ಶ್ರೀ ಅಯ್ಯಪ್ಪ ಸ್ವಾಮಿ  ಸೇವಾ ಸಂಘ ಮಹಿಳಾ ವಿಭಾಗದ ಸದಸ್ಯೆ, ಯೋಗ ಶಿಕ್ಷಕಿ ಪ್ರಮೀಳಾ ಜಗದೀಶ್‌ ಶೆಟ್ಟಿ ಇವರ ಮುಂದಾಳತ್ವ ದಲ್ಲಿ  ಹಾಗೂ ಜಗದೀಶ್‌ ಶೆಟ್ಟಿಯವರ ಸಹಕಾರ ದೊಂದಿಗೆ  ಯೋಗ ಶಿಬಿರವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ  ಸಮಿತಿಯ ಪದಾಧಿಕಾರಿಗಳು, ಹೆಚ್ಚಿನ ಸಂಖ್ಯೆಯ ಭಕ್ತರು, ಯೋಗಾಸಕ್ತರು, ವಿದ್ಯಾರ್ಥಿಗಳು, ಮಕ್ಕಳ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಅಧ್ಯಕ್ಷ ಸುಭಾಷ್‌ ಶೆಟ್ಟಿ ಇವರು ಮಾತನಾಡಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಈ ಸುಸಂದರ್ಭದಲ್ಲಿ ಅಯ್ಯಪ್ಪ ದೇವಸ್ಥಾನದ  ಸೇವಾ ಸಂಘದ    ವತಿಯಿಂದ ಪ್ರತಿ ವರ್ಷವೂ ಯೋಗ ದಿನಾಚರಣೆ ಹಾಗೂ ವಿದ್ಯಾರ್ಥಿಗಳ ಸಮ್ಮಾನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳಿಗೆ ಪ್ರೋತ್ಸಾಹಿಸುತ್ತಿದೆ. ಉತ್ತಮ ಅಂಕ ಪಡೆದ  ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಕೋರಿದರು. ಅಲ್ಲದೆ  ಯೋಗ ಶಿಬಿರದ ಉಸ್ತುವಾರಿ ವಹಿಸಿಕೊಂಡು ಉತ್ತಮ ಯೋಗಾಭ್ಯಾಸವನ್ನು   ನಡೆಸಿಕೊಟ್ಟ  ಪ್ರಮೀಳಾ ಜಗದೀಶ್‌ ಶೆಟ್ಟಿ ದಂಪತಿಯನ್ನು ಶಾಲು ಹೊದೆಸಿ, ಪುಷ್ಪಗುತ್ಛವನ್ನಿತ್ತು ಅಭಿನಂದಿಸಿದರು. ಕೊನೆಯಲ್ಲಿ ಅಂಬಿಕಾ ವಿಶ್ವನಾಥ್‌ ಶೆಟ್ಟಿ ಮತ್ತು ಶೇಖರ್‌ ಟಿ. ಪೂಜಾರಿ ಅವರ ಪ್ರಾಯೋಜಕತ್ವದಲ್ಲಿ ಲಘು ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸ ಲಾಗಿತ್ತು.  ವಿಶ್ವಸ್ತ  ಮಂಡಳಿಯ ಕಾರ್ಯದರ್ಶಿ ರಘುರಾಮ್‌ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

ಚಿತ್ರ-ವರದಿ : ಹರೀಶ್‌ ಪಡುಬಿದ್ರೆ ಪುಣೆ

Advertisement
Advertisement

Udayavani is now on Telegram. Click here to join our channel and stay updated with the latest news.

Next