Advertisement

25 ದಿನ ಮುಗಿಸಿದ ಅಯೋಗ್ಯ

11:29 AM Sep 11, 2018 | Team Udayavani |

ಸತೀಶ್‌ ನೀನಾಸಂ ಅಭಿನಯದ “ಅಯೋಗ್ಯ’ ಚಿತ್ರವು ಯಶಸ್ವಿಯಾಗಿ 25 ದಿನಗಳನ್ನು ಮುಗಿಸಿದೆ. 586 ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಚಿತ್ರ ಪೂರೈಸಿದ್ದು, “ಎಲ್ಲೂ ಅಲ್ಲಾಡಿಲ್ಲ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ನಿರ್ದೇಶಕ ಮಹೇಶ್‌. ಈ 25 ದಿನಗಳು ಪೂರೈಸಿದ ಖುಷಿಯಲ್ಲಿ ಮಹೇಶ್‌, ಸತೀಶ್‌ ಮತ್ತು ನಿರ್ಮಾಪಕ ಟಿ.ಆರ್‌. ಚಂದ್ರಶೇಖರ್‌ ಅವರು ನರ್ತಕಿ ಚಿತ್ರಮಂದಿರಕ್ಕೆ ಭೇಟಿಕೊಟ್ಟಿದ್ದಾರೆ.

Advertisement

ಈ ಸಂದರ್ಭದಲ್ಲಿ ನೆರೆದಿದ್ದ ನೂರಾರು ಜನರ ಸಮ್ಮುಖದಲ್ಲಿ 25 ಕೆಜಿ ತೂಕದ ಕೇಕ್‌ ಕಟ್‌ ಮಾಡಲಾಗಿದೆ. ಚಿತ್ರದ ಇನ್ನೊಂದು ವಿಶೇಷವೆಂದರೆ, ತಮಿಳಿಗೆ ರೀಮೇಕ್‌ ಹಕ್ಕುಗಳು ಮಾರಾಟವಾಗಿದ್ದು. ಹೌದು, “ಅಯೋಗ್ಯ’ ಚಿತ್ರದ ರೀಮೇಕ್‌ ಹಕ್ಕುಗಳು 18 ಲಕ್ಷಕ್ಕೆ ಮಾರಾಟವಾಗಿದೆ. ತಮಿಳಿನ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಯೊಂದು ಚಿತ್ರದ ರೀಮೇಕ್‌ ಹಕ್ಕುಗಳನ್ನು ಕೊಂಡಿದ್ದು, ಅದನ್ನು ತಮಿಳಿನಲ್ಲಿ ನಿರ್ಮಿಸುವುದಕ್ಕೆ ಸಜ್ಜಾಗಿದೆ.

ಇನ್ನು ಆ ಸಂಸ್ಥೆಯ ಬಳಿ ವಿಜಯ್‌ ಸೇತುಪತಿ ಅವರ ಡೇಟ್ಸ್‌ ಇದ್ದು, ಚಿತ್ರದಲ್ಲಿ ವಿಜಯ್‌ ಸೇತುಪತಿ ನಟಿಸುವ ಸಾಧ್ಯತೆ ಇದೆಯಂತೆ. ಮುರಳಿಗೆ ಚಿತ್ರ ಮಾಡುವ ಸಾಧ್ಯತೆ: ಎಲ್ಲಾ ಸರಿ, ಮಹೇಶ್‌ ಕುಮಾರ್‌ ಅವರ ಮುಂದಿನ ನಡೆಯೇನು ಎಂದು ಅವರಿಗೆ ಪ್ರಶ್ನೆ ಹಾಕಿದರೆ, ಸದ್ಯದಲ್ಲೇ ಮುಂದಿನ ಚಿತ್ರದ ಬಗ್ಗೆ ತೀರ್ಮಾನವಾಗಲಿದೆ ಎಂದು ಹೇಳುತ್ತಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಧ್ರುವ ಸರ್ಜಾ ಅಭಿನಯದಲ್ಲಿ “ಮದಗಜ’ ಎಂಬ ಚಿತ್ರವನ್ನು ಮಹೇಶ್‌ ನಿರ್ದೇಶಿಸಬೇಕಿತ್ತು.

ಆದರೆ, “ಪೊಗರು’ ಚಿತ್ರದಲ್ಲಿ ಧ್ರುವ ತೊಡಗಿಸಿಕೊಂಡಿರುವದರಿಂದ ಮತ್ತು ಅದು ಮುಗಿಯುವುದಕ್ಕೆ ಇನ್ನಷ್ಟು ಸಮಯ ಬೇಕಾಗಿರುವುದರಿಂದ, ಧ್ರುವ ಸರ್ಜಾ ಅಭಿನಯದಲ್ಲಿ ಮಹೇಶ್‌ ನಿರ್ದೇಶಿಸಬೇಕಿದ್ದ ಚಿತ್ರ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಆ ಸಮಯದಲ್ಲಿ ಮುರಳಿ ಅಭಿನಯದಲ್ಲಿ ಚಿತ್ರವನ್ನು ಮಹೇಶ್‌ ನಿರ್ದೇಶಿಸಲಿದ್ದಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next