Advertisement

Ayodhya: ರಾಮಮಂದಿರಕ್ಕೆ ಉ.ಪ್ರ.ಸಚಿವರು, ಶಾಸಕರ ಭೇಟಿ

12:15 AM Feb 12, 2024 | Team Udayavani |

ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರಕಾರದ ಸಚಿವರು ಮತ್ತು 325 ಶಾಸಕರು ರವಿವಾರ ಅಯೋಧ್ಯೆ ರಾಮಮಂದಿರಕ್ಕೆ ತೆರಳಿ, ಬಾಲಕ ರಾಮನ ದರ್ಶನ ಪಡೆದಿದ್ದಾರೆ. ಸಚಿವರು, ಶಾಸಕರು ಬರುವ ಹಾದಿಯಲ್ಲಿ ಅಯೋಧ್ಯೆಯ ಜನರು ಹೂವಿನ ಮಳೆಗರೆವ ಮೂಲಕ ಅದ್ದೂರಿ ಸ್ವಾಗತ ಕೋರಿದ್ದಾರೆ.

Advertisement

ಮಂದಿರಕ್ಕೆ ಭೇಟಿ ನೀಡಿದವರ ಪೈಕಿ ಬಿಜೆಪಿ, ಮಿತ್ರ ಪಕ್ಷಗಳ ಸದಸ್ಯರು ಮಾತ್ರವಲ್ಲದೇ, ಕಾಂಗ್ರೆಸ್‌, ಬಿಎಸ್‌ಪಿ, ಎಸ್‌ಬಿಎಸ್‌ಪಿ, ಆರ್‌ಎಲ್‌ಡಿ ಸದಸ್ಯರೂ ಇದ್ದರು. ಉತ್ತರ ಪ್ರದೇಶ ವಿಧಾನಸಭೆಯ ಸ್ಪೀಕರ್‌ ಸತೀಶ್‌ ಮಹಾನಾ ಹಾಗೂ ವಿಧಾನ ಪರಿಷತ್ತಿನ ಅಧ್ಯಕ್ಷ ಕುನ್ವರ್‌ ಮಾನವೇಂದ್ರ ಸಿಂಗ್‌ ಕೂಡ ಪ್ರವಾಸದಲ್ಲಿ ಭಾಗಿಯಾಗಿದ್ದರು. ಮಂದಿರ ಭೇಟಿ ಬಳಿಕ 14 ನಿಮಿಷಗಳ ವೀಡಿಯೋವನ್ನು ಸಿಎಂ ಯೋಗಿ ಟ್ವಿಟರ್‌ನಲ್ಲಿ ಹಂಚಿ­ಕೊಂಡಿದ್ದು, ಅದರಲ್ಲಿ ಎಲ್ಲ ಶಾಸಕರು, ಸಚಿವರು ರಾಮ ಭಜನೆ ಹಾಡು­ತ್ತಿರುವುದನ್ನು ಕಾಣಬಹುದಾಗಿದೆ.

ಗೈರಾದ್‌ ಎಸ್‌ಪಿ ವಿರುದ್ಧ ಕಿಡಿ: ಪ್ರಮುಖ ವಿಪಕ್ಷ ಸಮಾಜವಾದಿ ಪಕ್ಷವು ಮಂದಿರ ಭೇಟಿಗೆ ಸರಕಾರ ನೀಡಿದ್ದ ಆಹ್ವಾನವನ್ನು ತಿರಸ್ಕರಿಸಿತ್ತು. ಈ ಕುರಿತಂತೆ ಡಿಸಿಎಂಗಳಾದ ಮೌರ್ಯ ಮತ್ತು ಪಾಠಕ್‌ ಕಿಡಿ ಕಾರಿದ್ದು, ಸಮಾಜವಾದಿ ಪಕ್ಷವು ರಾಮ ಭಕ್ತರ ಮೇಲೆ ಗುಂಡು ಹಾರಿಸಿ ಎಂದು ಈ ಹಿಂದೆ ಹೇಳಿತ್ತು. ಇದೀಗ ಮಂದಿರ ದರ್ಶನಕ್ಕೂ ಗೈರಾಗಿದೆ. ಇದೆಲ್ಲ ಅವರ ಓಲೈಕೆ ರಾಜಕಾರಣದ ಭಾಗ ಎಂದಿ ದ್ದಾರೆ. ಈ ನಡುವೆ ಕಾಂಗ್ರೆಸ್‌ ಶಾಸಕರು ಎಸ್‌ಪಿ ನಿಲುವನ್ನು ಸಮರ್ಥಿಸಿ, ದೇಗುಲ ಭೇಟಿ ವೈಯಕ್ತಿಕ. ಒತ್ತಾಯಿಸು ವುದು ಸರಿಯಲ್ಲ ಎಂದಿದ್ದಾರೆ.

ಇಂದು ಕೇಜ್ರಿವಾಲ್‌, ಭಗವಂತ್‌ ಭೇಟಿ
ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಸೋಮವಾರ ರಾಮ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಕೇಜ್ರಿವಾಲ್‌ಗೆ ಮಂದಿರ ಉದ್ಘಾಟನೆಗೆ ಆಹ್ವಾನವಿತ್ತು. ಆದರೆ ಸಮಾರಂಭದ ಬಳಿಕ ಕುಟುಂಬ ಸಮೇತ ಭೇಟಿ ನೀಡುವುದಾಗಿ ಹೇಳಿದ್ದರು. ಇದೀಗ ಇಬ್ಬರು ನಾಯಕರು ಕುಟುಂಬದ ಜತೆಗೆ ಭೇಟಿ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next