Advertisement

Ram Mandir; ಕಾಣಿಯೂರು ಸ್ವಾಮೀಜಿ,ಭಟ್ಟಾರಕ ಶ್ರೀ ಅಯೋಧ್ಯೆಗೆ

11:32 PM Jan 20, 2024 | Team Udayavani |

ಮೂಡುಬಿದಿರೆ: ಅಯೋಧ್ಯೆಯಲ್ಲಿ ನಡೆಯ ಲಿರುವ ಶ್ರೀರಾಮ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿ ಸಲು ಉಡುಪಿ ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಮತ್ತು ಮೂಡುಬಿದಿರೆ ಶ್ರೀ ದಿಗಂಬರ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು ರವಿವಾರ ಅಪರಾಹ್ನ ಮಂಗಳೂರು ವಿಮಾನ ನಿಲ್ದಾಣದಿಂದ ಜತೆಯಾಗಿ ಅಯೋಧ್ಯೆಗೆ ಪ್ರಯಾಣಿಸಿದರು.

Advertisement

ಅಯೋಧ್ಯೆಗೆ ತೆರಳಿದ ಡಾ| ಪ್ರಭಾಕರ ಭಟ್‌
ಬಂಟ್ವಾಳ: ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮನ ವಿಗ್ರಹ ಪ್ರಾಣ ಪ್ರತಿಷ್ಠೆಯ ಸಮಾರಂಭದಲ್ಲಿ ಭಾಗವಹಿಸುವುದಕ್ಕೆ ಸೀಮಿತ ಸಂಖ್ಯೆಯ ಪ್ರಮುಖರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಆರೆಸ್ಸೆಸ್‌ ಮುಂದಾಳು ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಅವರು ಆಹ್ವಾನದ ಮೇರೆಗೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜ. 19ರ ರಾತ್ರಿ ಕಲ್ಲಡ್ಕದಿಂದ ಹೊರಟಿರುವ ಅವರು ರಾಜ್ಯದ ಪ್ರಮುಖರ ಜತೆ ವಿಮಾನದಲ್ಲಿ ಲಕ್ನೋಗೆ ತೆರಳಿ ಅಲ್ಲಿಂದ ಅಯೋಧ್ಯೆಗೆ ಸಾಗಿದ್ದಾರೆ. ಡಾ| ಭಟ್‌ ಅವರ ಆಪ್ತ ಕ. ಕೃಷ್ಣಪ್ಪ ಕೂಡ ಜತೆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next