Advertisement

Ayodhya Ram Mandir; ಯಾವುದೇ ಅಹಿತಕರ ಘಟನೆ ನಡೆಯದೇ ಸಾಂಗವಾಗಿ ನೆರವೇರಿದ ಪ್ರಾಣಪ್ರತಿಷ್ಠೆ

12:31 AM Jan 23, 2024 | Team Udayavani |

ಅಯೋಧ್ಯೆ: ಪಾಕಿಸ್ತಾನ ಪ್ರೇರಿತ ಉಗ್ರಸಂಘಟನೆ ಜೈಶ್‌ನ ಬೆದರಿಕೆ, ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನುವಿನ ಕುತಂತ್ರ, ಕೋಮುವಾದದ ಕಿಡಿ ಹೊತ್ತುವ ಸಂಶಯಗಳಿಗೆಲ್ಲ ಸೋಮವಾರ ನಡೆದ ರಾಮ ಮಂದಿರದ ಉದ್ಘಾಟನೆ ತೆರೆ ಎಳೆದಿದೆ. ಸಣ್ಣದೊಂದು ಸಂಘರ್ಷಕ್ಕೂ ಎಡೆ ನೀಡದೇ ನಡೆದ ಸಮಾರಂಭವು ಧಾರ್ಮಿಕವಾಗಿ ಪ್ರಾಮುಖ್ಯತೆ ಪಡೆದ ರಾಮಮಂದಿರ ಮಾತ್ರವಲ್ಲ, ಭಾರತದ ಸಾಮರಸ್ಯದ ಪ್ರತೀಕವಾದ ರಾಷ್ಟ್ರಮಂದಿರವೆಂದೂ ಸಾಬೀತುಪಡಿಸಿದೆ.

Advertisement

ಕೆಲ ದಿನದ ಹಿಂದಷ್ಟೇ ಜೈಶ್‌ ಉಗ್ರ ಸಂಘಟನೆ ಮಂದಿರಕ್ಕೆ ದಾಳಿಯ ಬೆದರಿಕೆ ಹಾಕಿತ್ತು. ಇತ್ತ ಖಲಿಸ್ತಾನಿ ಉಗ್ರ ಪನ್ನು ಕೂಡ ಮಂದಿರಕ್ಕೆ ಬೆದರಿಕೆ ಒಡ್ಡಿದ್ದ. ಏತನ್ಮಧ್ಯೆ ಕೆಲವೆಡೆ ಜಾಲತಾಣಗಳ ಮೂಲಕ ಕೋಮುಬೆಂಕಿ ಹಚ್ಚುವ ಪ್ರಯತ್ನಗಳು ನಡೆದಿವೆ. ಕರ್ನಾಟಕದ ತಾಜುದ್ದೀನ್‌ ದಫೇದಾರ್‌ ಎಂಬಾತ ಮಂದಿರದ ಮೇಲೆ ಇಸ್ಲಾಮಿಕ್‌ ಧ್ವಜ ಇರುವಂತೆ ಫೊಟೋ ಎಡಿಟ್‌ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿದ್ದ ಆದರೆ, ಪೊಲೀಸರು ಇಂಥ ಪರಿಸ್ಥಿತಿಗಳನ್ನೂ ಜಾಗರೂಕ ತೆಯಿಂದ ಸೂಕ್ಷ್ಮವಾಗಿ ನಿಭಾಯಿಸಿ ಹೊತ್ತುವ ಕಿಡಿಯನ್ನು ನಂದಿಸಿದ್ದಾರೆ. ಒಟ್ಟಾರೆ, ಸಾಮರಸ್ಯದ ನಿಲುವಿನಿಂದ ಸವಾಲು ಮೆಟ್ಟಿ ಮಂದಿರ ಉದ್ಘಾಟನೆಯಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next