Advertisement

Ayodhya ಮಸೀದಿ ನಿರ್ಮಾಣ ಜಾಗ ನನ್ನದು: ದಿಲ್ಲಿ ಮಹಿಳೆ

01:00 AM Jul 29, 2024 | Team Udayavani |

ಲಕ್ನೋ: ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ನೀಡಲಾಗಿರುವ ಜಾಗವು ತಮ್ಮ ಕುಟುಂಬದ್ದು ಎಂದು ದಿಲ್ಲಿ ಮಹಿಳೆಯೊಬ್ಬರು ತಕಾರರು ತೆಗಿದ್ದಾರೆ. ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಮಸೀದಿ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿ 5 ಎಕರೆ ಜಾಗ ನೀಡುವಂತೆ ತನ್ನ ತೀರ್ಪಿನಲ್ಲಿ ಆದೇಶಿಸಿತ್ತು. ಅದರಂತೆ ಜಾಗ ನೀಡಲಾಗಿದೆ.

Advertisement

ದಿಲ್ಲಿ ಮಹಿಳೆ ರಾಣಿ ಪಂಜಾಬಿಯ ತಕರಾರನ್ನು ಅಲ್ಲಗಳೆದಿರುವ ಇಂಡೋ-ಇಸ್ಲಾಮಿಕ್‌ ಕಲ್ಚರಲ್‌ ಫೌಂಡೇಷನ್‌ ಟ್ರಸ್ಟ್‌ ಮುಖ್ಯಸ್ಥ ಜುಫ‌ರ್‌ ಫ‌ರೂಕಿ, ಮಹಿಳೆಯ ವಾದವನ್ನು 2021ರಲ್ಲೇ ಅಲಹಾಬಾದ್‌ ಹೈಕೋರ್ಟ್‌ ತಿರಸ್ಕರಿಸಿದೆ ಎಂದು ತಿಳಿಸಿದ್ದಾರೆ. ಧನ್ನಿಪುರದಲ್ಲಿ ನೀಡಲಾ ಗಿರುವ ಜಾಗವು ತಮ್ಮ ಕುಟುಂಬದ್ದು ಎಂದು ರಾಣಿ ಪಂಜಾಬಿ ಹೇಳಿಕೊಂಡಿದ್ದಾರೆ. ತನ್ನ ಬಳಿ ಎಲ್ಲ ದಾಖಲೆಗಳಿದ್ದು, ಸುಪ್ರೀಂ ಕೋರ್ಟ್‌ ಕದ ತಟ್ಟುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next