Advertisement

Ayodhya: ಪ್ರಾಣಪ್ರತಿಷ್ಠೆಗೆ ಸಾಕ್ಷಿಯಾಗಲಿರುವ ದೇಶದ ಖ್ಯಾತನಾಮರಿವರು…

12:47 AM Jan 22, 2024 | Team Udayavani |

ರಾಜಕೀಯ ವಲಯ, ಸಂಘ ಸಂಸ್ಥೆಗಳ ಪ್ರಮುಖರು :
ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌, ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್‌ ಪಟೇಲ್‌, ಆರ್‌ಎಸ್‌ಎಸ್‌ ಮುಖ್ಯಸ್ಥರಾದ ಮೋಹನ್‌ ಭಾಗವತ್‌ ಸೇರಿದಂತೆ 25ಕ್ಕೂ ಅಧಿಕ ಮಂದಿ ರಾಜಕೀಯ ಪ್ರಮುಖರನ್ನು ಆಹ್ವಾನಿಸಲಾಗಿದೆ.

Advertisement

ಉದ್ಯಮಿಗಳು: ರತನ್‌ ಟಾಟಾ, ಗೌತಮ್‌ ಅದಾನಿ, ಮುಕೇಶ್‌ ಅಂಬಾನಿ, ಇನ್ಫೋಸಿಸ್‌ ನಾರಾಯಣ ಮೂರ್ತಿ ಹಾಗೂ ಆನಂದ್‌ ಮಹೀಂದ್ರಾ ಅವರನ್ನೂ ಒಳಗೊಂಡಂತೆ 20 ಮಂದಿ ಪ್ರಮುಖ ಉದ್ಯಮಿಗಳಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.

ಚಿತ್ರರಂಗದ ಖ್ಯಾತನಾಮರು, ಕ್ರೀಡಾ ಪಟುಗಳು: ಅಮಿತಾಭ್‌ ಬಚ್ಚನ್‌, ರಜನಿಕಾಂತ್‌, ರಿಷಬ್‌ ಶೆಟ್ಟಿ, ಅನುಪಮ್‌ ಖೇರ್‌, ಮೋಹನ್‌ ಲಾಲ್‌, ಅಕ್ಷಯ್‌ ಕುಮಾರ್‌, ಮಾಧುರಿ ದೀಕ್ಷಿತ್‌, ಕಂಗನಾ ರಣಾವತ್‌, ಅನುಷ್ಕಾ ಶರ್ಮಾ ಸೇರಿದಂತೆ ಹಲವು ನಟ-ನಟಿಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸ­ಲಾಗಿದೆ. ಜತೆಗೆ ಕ್ರೀಡಾ ಪಟುಗಳಾದ ಸಚಿನ್‌ ತೆಂಡುಲ್ಕರ್‌, ಮಹೇಂದ್ರ ಸಿಂಗ್‌ ಧೋನಿ, ವಿರಾಟ್‌ ಕೊಹ್ಲಿ, ವಿಶ್ವನಾಥ್‌ ಆನಂದ್‌, ಬೈಚುಂಗ್‌ ಭುಟಿಯಾ, ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ಮಿಥಾಲಿ ರಾಜ್‌ , ದೀಪಿಕಾ ಕುಮಾರಿ, ಪಿಟಿ ಉಷಾ, ಸೈನಾ ನೆಹ್ವಾಲ್‌, ಪಿ.ವಿ.ಸಿಂಧು ಸೇರಿದಂತೆ ಹಲವರಿಗೆ ಆಹ್ವಾನ ಪ್ರತಿಯನ್ನು ತಲುಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next