Advertisement

ಅಯೋಧ್ಯೆ ವಿವಾದ : ವಾರದೊಳಗೆ ತಾಜಾ ಸಂಧಾನ ವರದಿ ಸಲ್ಲಿಸಲು ಸುಪ್ರೀಂ ಆದೇಶ

01:55 PM Jul 12, 2019 | Sathish malya |

ಹೊಸದಿಲ್ಲಿ : ರಾಮ ಜನ್ಮಭೂಮಿ ಬಾಬರಿ ಮಸೀದಿ ಅಯೋಧ್ಯೆ ಭೂ ಒಡೆತನ ವಿವಾದವನ್ನು ಬಗೆ ಹರಿಸುವ ನಿಟ್ಟಿನಲ್ಲಿ ಮೂರು ಸದಸ್ಯರ ಸಂಧಾನ ಸಮಿತಿಯ ಕಾರ್ಯ ಪ್ರಗತಿಯ ತಾಜಾ ವರದಿಯನ್ನು ಒಂದು ವಾರದೊಳಗೆ ತನಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಇಂದು ಗುರುವಾರ ಆದೇಶಿಸಿದೆ.

Advertisement

ಒಂದೊಮ್ಮೆ ಅಯೋಧ್ಯೆ ಭೂವಿವಾದ ಒಡೆತನ ವಿವಾದವನ್ನು ಸೌಹಾರ್ದಯುತವಾಗಿ ಬಗೆ ಹರಿಸಲು ಅಸಾಧ್ಯವೆಂದು ಗೊತ್ತಾದಲ್ಲಿ ಇದೇ ಜು.25ರಿಂದ ತಾನು ದಿನ ನಿತ್ಯದ ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.

ಅಯೋಧ್ಯೆ ಭೂ ಒಡೆತನದ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವ ಸಾಧ್ಯತೆಯನ್ನು ಕಂಡುಕೊಳ್ಳಲು ಸುಪ್ರೀಂ ಕೋರ್ಟ್‌ ನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠದಿಂದ ನೇಮಕಗೊಂಡಿದ್ದ ಮೂವರು ಸಮಿತಿಯ ಸದಸ್ಯರನ್ನು ಒಳಗೊಂಡ ಸಮಿತಿಯ ಅಧ್ಯಕ್ಷ, ನಿವೃತ್ತ ನ್ಯಾಯಾಧೀಶ ಎಫ್ ಎಂ ಐ ಕಲೀಫ‌ುಲ್ಲಾ ಅವರನ್ನು ಸರ್ವೋಚ್ಚ ನ್ಯಾಯಾಲಯ ಇಂದು ಗುರುವಾರ, ಜು.18ರೊಳಗೆ ತಾಜಾ ಕಾರ್ಯ ಪ್ರಗತಿಯ ವರದಿಯನ್ನು ಸಲ್ಲಿಸುವಂತೆ ಕೇಳಿಕೊಂಡಿತು.

 

Advertisement

Udayavani is now on Telegram. Click here to join our channel and stay updated with the latest news.

Next