Advertisement

ವಿದ್ಯಾರ್ಥಿಗಳಿಂದ ಜಾಗೃತಿ

02:33 PM Dec 02, 2019 | Team Udayavani |

ರಾಣಿಬೆನ್ನೂರ: ಡಿ. 5ರಂದು ನಡೆಯಲಿರುವ ರಾಣಿಬೆನ್ನೂರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಪಾಲ್ಗೊಳ್ಳುವಂತೆ ಕನ್ನೂರ ವಿದ್ಯಾ ನಿಕೇತನ ಶಾಲೆಯ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ ರವಿವಾರ ಹಮ್ಮಿಕೊಳ್ಳಲಾಗಿತ್ತು.

Advertisement

ಕನ್ನೂರ ಶಾಲೆ ಪೋಷಕರು ದ್ವಿ ಚಕ್ರ ವಾಹನಗಳೊಂದಿಗೆ ಮತ್ತು 4, 5, 6ಮತ್ತು 7ನೇ ತರಗತಿಯ ಮಕ್ಕಳು ಸೈಕಲ್‌ ಹಾಗೂ ಪಾದಯಾತ್ರೆಯ ಮೂಲಕಜಾಥಾದಲ್ಲಿ ಉತ್ಸಾಹದಿಂದ ಪಾಲ್ಗೊಂಡುಮತದಾರರು ಕಡ್ಡಾಯವಾಗಿ ಮತ ಚಲಾಯಿಸುವಂತೆ ಭಿತ್ತಿ ಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಿದರು.

ಖನ್ನೂರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎಂ. ಖನ್ನೂರವರು ಜಾಥಾಕ್ಕೆ ಚಾಲನೆ ನೀಡಿದರು.ಸುಲೋಚನಾ ಖನ್ನೂರ, ಪ್ರಾಂಶುಪಾಲಡಾ| ಮಹಾಂತೇಶ ಕಮ್ಮಾರ, ಡಾ| ಪ್ರವೀಣ ಖನ್ನೂರ, ತಾಪಂ ಇಒ ಎಸ್‌.ಎಂ. ಕಾಂಬಳೆ, ಡಾ| ಶ್ರೀಶೈಲ ಖನ್ನೂರ, ಕೃಷ್ಣಮೂರ್ತಿ ಲಮಾಣಿ,ಮುಖ್ಯೋಪಾಧ್ಯಾಯಿನಿ ಲೀಲಾವತಿ ಕೆ., ಬಸವರಾಜ ಸೇರಿದಂತೆ ಶಾಲಾ ಶಿಕ್ಷಕರು, ಮಕ್ಕಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next