Advertisement

ಸ್ಥಳೀಯ ಇತಿಹಾಸದ ಪ್ರಜ್ಞೆ ಸರ್ವರಿಗೂ ಅಗತ್ಯ: ಕೆ. ಧನಪಾಲ್

12:58 PM Jan 05, 2024 | Team Udayavani |

ಕುದೂರು: ನಮ್ಮ ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ಇತಿಹಾಸ ಚರಿತ್ರೆಯಲ್ಲಿ ಬಹಳಷ್ಟು ಆಧಾರಗಳು ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಗೊಂಡಿರುತ್ತದೆ. ಅವನ್ನು ಇತಿಹಾಸದ ಮೂಲಕ ನೋಡುವಂತ  ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು. ಆಗ ನಮ್ಮ ಸ್ಥಳೀಯ ಇತಿಹಾಸವನ್ನು ಸಮೃದ್ಧವಾಗಿ ರಚಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ಹವ್ಯಾಸಿ ಶಾಸನ ತಜ್ಞ ಧನ ಪಾಲ್ ಅಭಿಪ್ರಾಯ ಪಟ್ಟರು.

Advertisement

ಈ ಮೂಲಕ ನಮ್ಮ ಸಮಗ್ರ ಇತಿಹಾಸದ ನೆರವಿಗೆ ಅದು ಪೂರಕ ಮತ್ತು ಪ್ರೇರಕವಾಗಿರುತ್ತದೆ. ಇಂತಹ ಮಾಹಿತಿಗಳು  ಸ್ಥಳೀಯ ಶಾಸನಗಳು, ವೀರಗಲ್ಲುಗಳು, ಮಾಸ್ತಿಗಲ್ಲುಗಳು, ತುರುಗೋಳ್ ಕಾಳಗ, ಪೆಣ್ ಬುಯಿಲ್ ಮುಂತಾದ ಹಲವಾರು  ಸಾಕ್ಷಿ ಪ್ರಜ್ಞೆಗಳ ಮೂಲಕ ಇತಿಹಾಸ ರಚನೆಗೆ ಪ್ರೇರಕವಾಗಿದೆ ಎಂದರು.

ಕುದೂರಿನ ಶ್ರೀಮತಿ ನೀಲಮ್ಮ ಕುದೂರು, ಕೆಎ ಸತ್ಯನಾರಾಯಣ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ಶಾಸನಗಳು ಮತ್ತು ವೀರಗಲ್ಲುಗಳು ಕುರಿತಾದ ಕಾರ್ಯಗಾರ ಹಾಗೂ  ಚಿತ್ರ ಪಟಗಳ ವೀರಗಲ್ಲುಗಳು ಹಾಗೂ ಶಾಸನಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ  ಹಾಸನ ಕ್ಷೇತ್ರದಲ್ಲಿ ಕೆಲಸವನ್ನು ನಿರ್ವಹಿಸುತ್ತಿರುವ ನಿವೃತ್ತ ಬಿಎಂಟಿಸಿ ಡ್ರೈವರ್ ಹಾಗೂ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಇವರ ಕಾರ್ಯವನ್ನು ಶ್ಲಾಘನೆಗೆ ಒಳಗಾದ ಧನ ಪಾಲ್ ಕೆ. ಶಾಸನದ ಮಹತ್ವ, ಶಾಸನಗಳ ಸಂರಕ್ಷಣೆ,, ಇತಿಹಾಸ ನಿರ್ಮಾಣದಲ್ಲಿ ಶಾಸನಗಳ ಮಹತ್ವ, ವೀರಗಲ್ಲುಗಳ ವಿವರಣೆ, ಮಾಸ್ತಿಗಲ್ಲಿಗಳ ಹಿನ್ನೆಲೆ ಮುಂತಾದ ನೆಲೆಗಳಲ್ಲಿ ಹಲವಾರು ಶಾಸನಗಳ ವಿವರಣೆಗಳನ್ನು ನೀಡುತ್ತಾ ವಿದ್ಯಾರ್ಥಿಗಳಿಗೆ ಆಸಕ್ತಿದಾಯಕವಾಗಿ ಮಾಹಿತಿಯನ್ನು ನೀಡಿದರು.

ಆನಂತರ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಶಾಸನಗಳ, ವೀರಗಲ್ಲುಗಳ ಪ್ರಾತ್ಯಕ್ಷಿಕೆಯನ್ನು ನೀಡಿದರು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ರಾಜಕುಮಾರ್  ಮಾತನಾಡುತ್ತಾ, ಇಂದಿನ ಆಧುನಿಕ ಜಗತ್ತಿನಲ್ಲಿ ಕೂಡ ಇತಿಹಾಸದ ಅಂಶಗಳು ಪ್ರತಿನಿತ್ಯ ದಾಖಲಾಗುತ್ತವೆ. ಈ ದಾಖಲು ನಮ್ಮ ಮುಂದಿನ ಹೆಜ್ಜೆಯನ್ನು ನಿರ್ಧಾರ ಮಾಡಲು ತುಂಬಾ ಅವಶ್ಯಕ ಮತ್ತು ಅನಿವಾರ್ಯವೂ ಕೂಡ ಆಗಿದೆ. ಈ ನೆಲೆಯಲ್ಲಿ ಸ್ಥಳೀಯ ಇತಿಹಾಸದ ಕುರಿತು ತಿಳಿದುಕೊಳ್ಳಬೇಕಿರುವುದು ನಮ್ಮೆಲ್ಲರ ಅವಶ್ಯಕತೆ ಎಂದು ಹೇಳಿದರು.

ಮುಂದುವರೆದು ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ನಮ್ಮ ನಡುವೆ ಇರುವ ಪೂರ್ವಜರ ಇತಿಹಾಸ, ಭೌಗೋಳಿಕ ಇತಿಹಾಸ, ಆರ್ಥಿಕ ಇತಿಹಾಸ, ಸಾಮಾಜಿಕ ಇತಿಹಾಸ, ಸಾಂಸ್ಕೃತಿಕ ಇತಿಹಾಸ.. ಎಲ್ಲಾ ನೆಲೆಗಟ್ಟು ಕೂಡ ನಮಗೆ ತೀರ ಅಗತ್ಯ.  ವಿದ್ಯಾರ್ಥಿಗಳು ಇದರ ಮಹತ್ವ ಅರಿಯಬೇಕು. ಆಗ ನಮ್ಮ ಆಲೋಚನಾ ಸಾಮರ್ಥ್ಯ, ವಿವೇಚನಾ ಕೌಶಲ್ಯ, ವ್ಯಕ್ತಿತ್ವ ವಿಕಸನಕ್ಕೆ ಸಹಾಯಕವಾಗುತ್ತದೆ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಪುಟ್ಟಲಕ್ಷ್ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ದೇವರಾಜ್ ಸ್ವಾಗತಿಸಿ, ಜಗದೀಶ್ ಜೆ. ವಂದಿಸಿದರು.

ಪ್ರಾಧ್ಯಾಪಕರಾದ ರಾಘವೇಂದ್ರ, ಶಿವರಾಜ್, ತ್ಯಾಗರಾಜ್, ಕೃಷ್ಣವೇಣಿ ಮತ್ತು ಡಾ. ಮುರಳಿ ಕೂಡ್ಲೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next