Advertisement

ಆಟೋ ಕದಿಯುತ್ತಿದ್ದ ಇಬ್ಬರ ಬಂಧನ

12:36 AM Apr 04, 2019 | Team Udayavani |

ಬೆಂಗಳೂರು: ಮನೆಮುಂದೆ ನಿಲ್ಲಿಸುತ್ತಿದ್ದ ಆಟೋಗಳನ್ನು ಕಳವು ಮಾಡಿಕೊಂಡು ಹೋಗುತ್ತಿದ್ದ ಫೈನಾನ್ಸ್‌ ಕಂಪನಿಯ ಇಬ್ಬರು ಉದ್ಯೋಗಿಗಳನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಶ್ರೀನಿವಾಸನಗರದ ರಾಜು ಹಾಗೂ ಬಸವೇಶ್ವರ ನಗರದ ಹೇಮಂತಕುಮಾರ ಬಂಧಿತರು. ಆರೋಪಿಗಳಿಂದ 13.20 ಲಕ್ಷ ರೂ. ಮೌಲ್ಯದ 12 ಆಟೋಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಮತ್ತೂಬ್ಬ ಆರೋಪಿ ರಮೇಶ್‌ರಾಮು ಎಂಬಾತನ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಮೇಶ್‌ ರಾಮು ನಡೆಸುತ್ತಿದ್ದ ಎಸ್‌.ಆರ್‌ ಕನ್ಸಲ್ಟೆಂಟ್‌ನಲ್ಲಿ ರಾಜು ಹಾಗೂ ಹೇಮಂತ್‌ ಕೆಲಸಮಾಡುತ್ತಿದ್ದರು. ರಮೇಶ್‌ ರಾಮು ಕಂಪನಿ ಮೂಲಕ ಆಟೋ ಖರೀದಿಸುವವರಿಗೆ ಫೈನಾನ್ಸ್‌ ನೀಡುತ್ತಿದ್ದ. ಹಣ ಕಟ್ಟದ ಆಟೋ ಚಾಲಕರಿಂದ ಆಟೋ ಜಪ್ತಿ ಮಾಡಿಕೊಂಡು ಬರುವ ಕೆಲಸವನ್ನು ಉಳಿದ ಇಬ್ಬರು ಆರೋಪಿಗಳಿಗೆ ವಹಿಸಿದ್ದರು.

ಆದರೆ ಮೂವರು ಆರೋಪಿಗಳು ಆಟೋ ಸೀಜ್‌ ಮಾಡುವ ಬದಲು ಆಟೋಗಳನ್ನೇ ಕಳವು ಮಾಡಿ ಮತ್ತೂಬ್ಬರಿಗೆ ಬಾಡಿಗೆಗೆ ನೀಡುತ್ತಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಅಫ್ಜಲ್‌ ಖಾನ್‌ ಎಂಬುವವರು ಮನೆ ಮುಂದೆ ನಿಲ್ಲಿಸಿದ್ದ ಆಟೋ ರಾತ್ರಿ ವೇಳೆ ಕಳ್ಳತನವಾಗಿತ್ತು. ಈ ಕುರಿತು ಅಫ್ಜಲ್‌ ನೀಡಿದ್ದ ದೂರು ಆಧರಿಸಿ ತನಿಖೆ ನಡೆಸಿದಾಗ ಮೂವರು ಆರೋಪಿಗಳ ಪಾತ್ರ ಬಯಲಿಗೆ ಬಂದಿತು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next