Advertisement

ಆಗಸ್ಟಾ ಹಗರಣ: ಮಿಶೆಲ್‌ ರಕ್ಷಣೆಗೆ ಕಾಂಗ್ರೆಸ್‌ ನಿಲ್ಲುತ್ತಾ? ಶಾ

12:05 PM Dec 05, 2018 | Team Udayavani |

ಹೊಸದಿಲ್ಲಿ : ಆಗಸ್ಟಾ ವೆಸ್ಟ್‌ ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್‌ ಮಿಶೆಲ್‌ ಅವರನ್ನು ಭಾರತಕ್ಕೆ ಗಡೀಪಾರು ಮಾಡಿಸಿಕೊಂಡಿರುವುದು ಪ್ರಧಾನಿ ನರೇಂದ್ರ ಮೋದಿ ಸರಕಾರದ ಬಹುದೊಡ್ಡ ಸಾಧನೆಯಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ.

Advertisement

ಕಾಂಗ್ರೆಸ್‌ ಪಕ್ಷ ತನ್ನ ಮುಖ ಉಳಿಸಿಕೊಳ್ಳಲು ಇದೀಗ ಕ್ರಿಶ್ಚಿಯನ್‌ ಮಿಶೆಲ್‌ ಅವರನ್ನು ರಕ್ಷಿಸುತ್ತಾರಾ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ವ್ಯಂಗ್ಯವಾಡಿದ್ದಾರೆ. 

ಮಿಶೆಲ್‌ ಅವರನ್ನುಚುನಾವಣೆಯ ಈ ಸಂದರ್ಭದಲ್ಲೇ ಗಡೀಪಾರು ಮಾಡಿಸಿಕೊಂಡಿರುವ ಮೋದಿ ಸರಕಾರವನ್ನು ಪ್ರಶ್ನಿಸುವ ಯಾವ ನೈತಿಕತೆಯೂ ಕಾಂಗ್ರೆಸ್‌ಗೆ ಇಲ್ಲ; ಅಲ್ಲದೇ ಇದು ಬಿಟ್ಟರೆ ಕಾಂಗ್ರೆಸ್‌ ಬಳಿ ಬೇರೆ ಯಾವುದೇ ವಿಷಯವೂ ಇಲ್ಲ ಎಂದು ಅಮಿತ್‌ ಶಾ ಹೇಳಿದ್ದಾರೆ. 

ಯುಎಇ ನ್ಯಾಯಾಲಯ ಕ್ರಿಶ್ಚಿಯನ್‌ ಮಿಶೆಲ್‌ ಅವರನ್ನು ಭಾರತಕ್ಕೆ ಗಡೀಪಾರು ಮಾಡುವುದಕ್ಕೆ ಅನುಮತಿ ನೀಡಿದುದನ್ನು ಅನುಸರಿಸಿ ನಿನ್ನೆ ಮಂಗಳವಾರ ತಡ ರಾತ್ರಿಯೇ ಅವರನ್ನು ಭಾರತಕ್ಕೆ ಕರೆತರಲಾಗಿದೆ. ಆಗಸ್ಟಾ ವೆಸ್ಟ್‌ ಲ್ಯಾಂಡ್‌ ಹೆಲಿಕಾಪ್ಟರ್‌ ಹಗರಣದಲ್ಲಿ ಲಂಚ ಸ್ವೀಕರಿಸಿದ ಆರೋಪ ಕ್ರಿಶ್ಚಿಯನ್‌ ಮಿಶೆಲ್‌ ಅವರ ಮೇಲಿದೆ.  

Advertisement

Udayavani is now on Telegram. Click here to join our channel and stay updated with the latest news.

Next