Advertisement

ಪೂಜಾರಿ ವಿರುದ್ಧ ಆಡಿಯೋ ವೈರಲ್‌

11:25 AM Dec 04, 2018 | Team Udayavani |

ಮಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬೆಂಬಲಿಸಿ ಮಾತನಾಡಿದ ಹಿರಿಯ ಕಾಂಗ್ರೆಸ್‌ ನಾಯಕ ಜನಾರ್ದನ ಪೂಜಾರಿ ಅವರನ್ನು ವ್ಯಕ್ತಿಯೊಬ್ಬರು ನಿಂದಿಸಿ ಕೊಲೆ ಮಾಡುವಂತೆ ಪ್ರಚೋದಿಸುವ ಆಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

ಕುದ್ರೋಳಿ ದೇವಸ್ಥಾನದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೂಜಾರಿ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದಾದರೆ ಆಗಲಿ ಎಂದಷ್ಟೇ ಸುದ್ದಿಗಾರರ ಜತೆ ಹೇಳಿದ್ದರು. ಆದರೆ ವಾಸ್ತವದಲ್ಲಿ ಪೂಜಾರಿ ಅವರ ಹೇಳಿಕೆಯ ಒಳಾರ್ಥ ಹಾಗೂ ಆಶಯವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಪೂಜಾರಿ ಅವರ ಹೇಳಿಕೆಗೆ ವ್ಯಕ್ತಿಯೊಬ್ಬ ತಾನು ಕಾಂಗ್ರೆಸ್‌ ಅಲ್ಪಸಂಖ್ಯಾಕ ಘಟಕದ ಪದಾಧಿಕಾರಿ ಎಂದು ಹೇಳಿಕೊಂಡು,ಸಾಮಾಜಿಕ ಜಾಲ-ತಾಣಗಳಲ್ಲಿ ಪೂಜಾರಿ ವಿರುದ್ಧ ಮಾತನಾಡಿರುವ ಆಡಿಯೋವನ್ನು ಹರಿಯ ಬಿಟ್ಟಿದ್ದಾನೆ. ಸುಮಾರು 2.45 ನಿಮಿಷದ ಈ ಆಡಿಯೋದಲ್ಲಿ ಆ ಅನಾಮಧೇಯ ವ್ಯಕ್ತಿ ಜನಾರ್ದನ ಪೂಜಾರಿ ಅವರನ್ನು ಹೀನಾಯವಾಗಿ ನಿಂದಿಸಿದ್ದು, ಜತೆಗೆ ಎನ್‌ಕೌಂಟರ್‌ ಮಾಡಬೇಕು ಎಂದು ಹೇಳಿ ಕೊಲೆಗೆ ದುಷ್ಪ್ರೇರಣೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next