Advertisement

Mangaluru ಮನೆಯಿಂದ ಕಳ್ಳತನಕ್ಕೆ ಯತ್ನ

09:54 PM Nov 03, 2023 | Team Udayavani |

ಮಂಗಳೂರು: ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಘಟನೆ ನಗರದ ಬಿಜೈ ಕೊಟ್ಟಾರ ಕ್ರಾಸ್‌ನಲ್ಲಿ ನಡೆದಿದೆ.

Advertisement

ಶುಕ್ರವಾರ ಮುಂಜಾನೆ 2.25ಕ್ಕೆ ಕಳ್ಳರು ಅಂಗಳದಲ್ಲಿದ್ದ ಪಿಕ್ಕಾಸಿನ ಸಹಾಯದಿಂದ ಮನೆಯ ಹಿಂಬದಿಯ ಬಾಗಿಲನ್ನು ಒಡೆದು ಕಳ್ಳತನಕ್ಕೆ ಯತ್ನಿಸಿದಾಗ ಮನೆಯಲ್ಲಿ ಮಲಗಿದ್ದ ಮನೆಕೆಲಸದವರು ಗಮನಿಸಿ ಬೊಬ್ಬೆ ಹೊಡೆದರು. ಆಗ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ. ಉರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next