Advertisement

ದರೋಡೆಗೆ ಯತ್ನ : ಸಿಸಿ ಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

12:48 PM Feb 07, 2021 | Team Udayavani |

ದೊಡ್ಡಬಳ್ಳಾಪುರ: ನಗರದ ದೇವರಾಜ ನಗರದ ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಮನೆ ಗೇಟ್‌ ಬಾಗಿಲು ಮುರಿದು, ದರೋಡೆಕೋರರು ದರೋಡೆಗೆ ಯತ್ನಿಸಿ ಒಳ ನುಗ್ಗಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Advertisement

ಇದನ್ನೂ ಓದಿ :ಮೊದಲ ಸಾಹಿತ್ಯ ಸಮ್ಮೇಳನ ಮಸ್ಕಿಯ ಹಿರಿಮೆ

ಮೊದಲಿಗೆ ಮನೆ ಆವರಣದಲ್ಲಿ ನಿಲ್ಲಿಸಲಾಗಿರುವ ಬೈಕ್‌ ಕಳವು ಮಾಡಲು ಯತ್ನಿಸಿದ್ದಾರೆ. ಆದರೆ ಎಲ್ಲಾ ಬೈಕ್‌ಗೂ ಹ್ಯಾಂಡಲ್‌ ಲಾಕ್‌ ಮಾಡಿದ್ದರಿಂದ ಸಾಧ್ಯವಾಗಿಲ್ಲ. ಇನ್ನೋವಾ ಕಾರಿನಲ್ಲಿ ಬಂದಿರುವ ಕಳ್ಳರು, ಮನೆ ಗೇಟ್‌ ಬಾಗಿಲಲ್ಲೇ ಕಾರು ನಿಲ್ಲಿಸಿದ್ದಾರೆ. ಕಾರಿನ ನಂಬರ್‌ ಪ್ಲೇಟ್‌ ಕಾಣಿಸಿದಂತೆ ಹೂವಿನ ಹಾರ ನೇತು ಹಾಕಿದ್ದು, ಬಾಗಿಲು ಮುರಿದು ಒಳನುಗ್ಗುವಷ್ಟರಲ್ಲಿ ರಸ್ತೆಯಲ್ಲಿ ಯಾರೋ ಬಂದಿರುವ ಕಾರಣದಿಂದ ಕಾರು ಹತ್ತಿ ಪರಾರಿಯಾಗಿದ್ದಾರೆ. ಚಿರತೆ ಗ್ರಾಮಕ್ಕೆ ನುಗ್ಗುತ್ತದೆಂದು ಗ್ರಾಮ ಕಾವಲು. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next