Advertisement

ಮೀಸಲು ಕ್ಷೇತ್ರದ ಟಿಕೇಟ್‌ಗಾಗಿ ಮಾಜಿ ಸಚಿವರ ಕೊಲೆಗೆ ಸಂಚು?

04:05 PM Oct 01, 2017 | Team Udayavani |

ಕಲಬುರಗಿ : ಅಧಿಕಾರಕ್ಕಾಗಿ ರಾಜಕಾರಣಿಗಳು ಯಾವುದೇ ಕನಿಷ್ಠ ಮಟ್ಟಕ್ಕೆ ಇಳಿಯುತ್ತಾರೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಮೀಸಲು ಕ್ಷೇತ್ರದ ಟಿಕೇಟ್‌ಗಾಗಿ ಮಾಜಿ ಸಚಿವ, ದಲಿತ ನಾಯಕ ರೇವು ನಾಯಕ್‌ ಬೆಳಮಗಿ ಅವರನ್ನು ಕಾರು ಅಪಘಾತದಲ್ಲಿ ಕೊಲೆಗೈಯುವ ಸಂಚು ನಡೆಸಿರುವುದು ಇದೀಗ ಬಯಲಾಗಿದೆ. ಆತಂಕಕಾರಿ ಬೆಳವಣಿಗೆ ಎಂಬಂತೆ ಸಂಚಿನಲ್ಲಿ ಕಾರೂ ಚಾಲಕನೂ ಬಾಗಿಯಾಗಿದ್ದ.

Advertisement

ಈ ಬಗ್ಗೆ ಬೆಳಮಗಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದು,’ನನ್ನ ಕಾರು ಚಾಲಕ ಸೇರಿ ಹಲವರು ನನ್ನನ್ನು ರಸ್ತೆ ಅಪಘಾತ ಮಾಡಿಸಿ ಹತ್ಯೆಗೈಯಲು ಸಂಚು ಹೂಡಿದ್ದರು. ಕಲಬುರಗಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೇಟ್‌ ಆಕಾಂಕ್ಷಿಗಳೇ ಕೃತ್ಯಕ್ಕೆ ಸಂಚು ರೂಪಿಸಿದ್ದಾರೆ ಎಂದು ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಆಡಿಕೊಳ್ಳುತ್ತಿದ್ದಾರೆ. ನನಗೆ ಹಲವು ಅನುಮಾನಗಳಿದ್ದು, ಅಪಘಾತಕ್ಕೆ ಕಾರಣವಾದ ಚಾಲಕನೂ ಪರಾರಿಯಾಗಿದ್ದಾನೆ. ಈ ಬಗ್ಗೆ ವರಿಷ್ಠರಿಗೆ ದೂರು ನೀಡುತ್ತೇನೆ. ಅವರ ಸೂಚನೆಯಂತೆ ಹೋರಾಟ ಮುಂದುವರೆಸುತ್ತೇನೆ’ ಎಂದರು.

ಮೇ 20  ಆಳಂದದ ಚಿಂಚನಸೂರ ಗ್ರಾಮದಲ್ಲಿ  ಬೆಳಮಗಿ ಪ್ರಯಾಣಿಸುತ್ತಿದ್ದ ಇನೋವಾ ಕಾರು ಸೇತುವೆಗೆ ಡಿಕ್ಕಿಯಾಗಿ ಪಲ್ಟಿಯಾಗಿತ್ತು. ಅವಘಡದಲ್ಲಿ  ಬೆಳಮಗಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕ ಕಾರಿನಲ್ಲಿದ್ದ ಚಾಲಕ ನಾಪತ್ತೆಯಾಗಿದ್ದ. 

ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next