Advertisement

ಹಳೆ ದ್ವೇಷ: ತುಮಕೂರಿನಲ್ಲಿ ಯೋಧನ ಮೇಲೆ ಮಾರಣಾಂತಿಕ ಹಲ್ಲೆ 

11:40 AM Jan 17, 2017 | Team Udayavani |

ಕೊರಟಗೆರೆ: ಇಲ್ಲಿನ ಬೈಚಾಪುರ ಗ್ರಾಮದಲ್ಲಿ  ರಜೆಯಲ್ಲಿ  ಮನೆಗೆ ಬಂದಿದ್ದ ಯೋಧನೊಬ್ಬನ ಮೇಲೆ ದ್ವೇಷ ಸಾಧಿಸಿ ಗುಂಪೊಂದು ಮಾರಣಾಂತಿಹ ಹಲ್ಲೆ ನಡೆಸಿದ ಘಟನೆ ಸೋಮವಾರ ಸಂಜೆ ನಡೆದಿದೆ.

Advertisement

ಜಮ್ಮುವಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ಗೋವಿಂದರಾಜು (23) ಮತ್ತು ಆತನ ತಾಯಿ ಹನುಮಕ್ಕ (55)ಮೇಲೆ ಗುಂಪು ದಾಳಿ ನಡೆದಿದ್ದು ಕೊರಟಗೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಗ್ರಾಮ ಪಂಚಾಯತ್‌ ಸದಸ್ಯೆ ಜಯಲಕ್ಷ್ಮಮ್ಮ ಮತ್ತು ಬೆಂಬಲಿಗರು ಹಲ್ಲೆ ನಡೆಸಿರುವುದಾಗಿ ಅರೋಪಿಸಲಾಗಿದೆ. ದಾಳಿ ನಡೆಸಿದ ವೇಳೆ ಯೋಧ ಗೋವಿಂದ್‌ರಾಜ್‌ ಬಳಿಯಿದ್ದ  ಚಿನ್ನದ ಸರ  ಮತ್ತು 5000 ರೂಪಾಯಿ ನಗದು ಹಣವನ್ನು ದೋಚಿರುವ ಬಗ್ಗೆ ದೂರಿನಲ್ಲಿ ಹೇಳಲಾಗಿದೆ.

ಈ ಹಿಂದೆ ಊರಿನ ಅಭಿವೃದ್ದಿಗೆ ಶ್ರಮಿಸದೆ ಇದ್ದುದಕ್ಕಾಗಿ ಜಯಲಕ್ಷ್ಮಮ್ಮ ರನ್ನು ಯೋಧ ತರಾಟೆಗೆ ತೆಗೆದುಕೊಂಡಿದ್ದು, ಇದೇ ದ್ವೇಷದಲ್ಲಿ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. 

ಗೋವಿಂದ್‌ ರಾಜ್‌ ಕಳೆದ 3 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಲ್ಲೆಯ ಬಳಿಕ ಅವರು ಚೇತರಿಸಿಕೊಂಡಿದ್ದು, ಪ್ರಾಣಾಪಾಯವಿಲ್ಲ ಎಂದು ತಿಳಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next