Advertisement

ಶ್ರೀರಾಮಸೇನೆ ಮುಖಂಡರ ಮೇಲೆ ಲಾಂಗ್‌,ಮಚ್ಚಿನ ದಾಳಿ: ಓರ್ವ ಗಂಭೀರ

04:23 PM Feb 01, 2017 | Team Udayavani |

ಗದಗ : ಇಲ್ಲಿನ  ಗ‌ಂಗಿಮಡಿ ಬಡಾವಣೆ ಬಳಿ ಮಂಗಳವಾರ ಇಬ್ಬರು ಶ್ರೀರಾಮ ಸೇನೆ ಯ ಮುಖಂಡರ ಮೇಲೆ 10 ಕ್ಕೂ ಹೆಚ್ಚು ದುಷ್ಕರ್ಮಿಗಳು ಲಾಂಗ್‌ ಮತ್ತು ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. 

Advertisement

ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ರಾಜು ಖಾನಪ್ಪನವರ್‌ ಮತ್ತು ಮುಖಂಡ ಬಸವರಾಜು ಕುರ್ತಕೋಟಿ ಎನ್ನುವವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ರಾಜು ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. 

ಕಾಂಗ್ರೆಸ್‌ ಮುಖಂಡರೊಬ್ಬರು ತನ್ನ ಬೆಂಬಲಿಗರೊಂದಿಗೆ ದಾಳಿ ನಡೆಸಿದಾದರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಪೂರ್ವ ದ್ವೇಷವೇ ದಾಳಿ ನಡೆಸಲು ಕಾರಣ ಎನ್ನಲಾಗಿದೆ.  

ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next