Advertisement

ಶ್ರೀಶೈಲಂನಲ್ಲಿ ಕನ್ನಡಿಗರ ಮೇಲೆ ಹಲ್ಲೆ: ಕ್ರಮಕ್ಕೆ ಆಗ್ರಹ

04:47 PM Apr 02, 2022 | Team Udayavani |

ಲಿಂಗಸುಗೂರು: ಆಂಧ್ರಪ್ರದೇಶದ ಶ್ರೀಶೈಲಂ ದೇವಸ್ಥಾನದ ಬಳಿ ಕನ್ನಡಿಗರ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ. ಕೂಡಲೇ ಕನ್ನಡಿಗರ ರಕ್ಷಣೆಗೆ ಮುಂದಾಗುವಂತೆ ಕರವೇ ಮುಖಂಡರು ಶುಕ್ರವಾರ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

Advertisement

ಶ್ರೀಶೈಲಂ ನಡೆಯುತ್ತಿರುವ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವದಲ್ಲಿ ಕರ್ನಾಟಕದಿಂದ ಸಾವಿರಾರು ಭಕ್ತಾದಿಗಳು ಪಾದಯಾತ್ರೆ ಹಾಗೂ ವಾಹನಗಳ ಮೂಲಕ ತೆರಳುತ್ತಿದ್ದಾರೆ. ಆದರೆ, ಮಾ.31ರಂದು ಕ್ಷುಲ್ಲಕ ಕಾರಣಕ್ಕೆ ಇಬ್ಬರು ಕನ್ನಡಿಗರ ಮೇಲೆ ಆಂಧ್ರದ ವ್ಯಾಪಾರಸ್ಥರು ತೀವ್ರ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಓರ್ವನು ಗಂಭೀರ ಗಾಯಗೊಂಡಿದ್ದಾನೆ. ಇದುಲ್ಲದೆ ಕನ್ನಡಿಗರ ವಾಹನಗಳನ್ನು ಜಖಂಗೊಳಿಸಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಮುಂದಾಗಿ ಕನ್ನಡಿಗರನ್ನು ರಕ್ಷಣೆ ನೀಡುವಂತೆ ಆಂಧ್ರ ಸರ್ಕಾರಕ್ಕೆ ಸೂಕ್ತ ಸಲಹೆ ನೀಡಬೇಕು ಎಂದು ಆಗ್ರಹಿಸಿದರು.

ಕರವೇ ಅಧ್ಯಕ್ಷ ಅಂಜಿನೇಯ ಭಂಡಾರಿ, ಬೀಮೇಶ ನಾಯಕ, ವೆಂಕಟೇಶ ಉಪ್ಪಾರ, ಮೌನೇಶ ಬುಳ್ಳಾಪುರ, ಶ್ರೀನಿವಾಸ, ಯಲ್ಲಪ್ಪ ಭೋವಿ ಹಾಗೂ ಇನ್ನಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next