Advertisement

ಕಟಪಾಡಿ: ಬೈಕ್ ರಿಪೇರಿ ಮಾಡಿಕೊಂಡು ಗ್ಯಾರೇಜ್ ಮಾಲಕನಿಗೆ ಹಲ್ಲೆ ನಡೆಸಿ ಪರಾರಿ

09:58 PM Mar 17, 2022 | Team Udayavani |

ಕಾಪು: ಗ್ಯಾರೇಜ್‌ಗೆ ಬಂದ ಅಪರಿಚಿತರು ಬೈಕ್ ರಿಪೇರಿ ಮಾಡಿಸಿಕೊಂಡು ರಿಪೇರಿಯ ಹಣದ ಬದಲು ಗ್ಯಾರೇಜ್ ಮಾಲಕನಿಗೆ ಇಂಜಿನ್ ಕೇಸ್‌ನಿಂದ ಹೊಡೆದು ಪರಾರಿಯಾದ ಘಟನೆ ಮಾ. 16ರಂದು ಕಟಪಾಡಿಯಲ್ಲಿ ನಡೆದಿದೆ.

Advertisement

ಕಟಪಾಡಿ ಏಣಗುಡ್ಡೆಯಲ್ಲಿ ಶ್ರೀ ದೇವಿ ಆಟೋ ವರ್ಕ್ಸ್ ಎಂಬ ಹೆಸರಿನ ಗ್ಯಾರೇಜ್ ನಡೆಸುತ್ತಿರುವ ಪಾಂಗಾಳ ಆರ್ಯಾಡಿ ನಿವಾಸಿ ಕೇಶವ ಹಲ್ಲೆಗೊಳಗಾದ ಗ್ಯಾರೇಜ್ ಮಾಲಕ.

ಮಾ.16ರಂದು ಸಂಜೆ ಕೇಶವ ಅವರ ಗ್ಯಾರೇಜ್‌ಗೆ ನಂಬರ್ ಪ್ಲೇಟ್ ಇಲ್ಲದ ಟಿವಿಎಸ್ ಅಪಾಚಿ ಬೈಕ್‌ನೊಂದಿಗೆ ಬಂದ ಅಪರಿತರಿಬ್ಬರು ಬೈಕ್ ರಿಪೇರಿ ಮಾಡಿಕೊಡುವಂತೆ ಕೇಳಿ ಕೊಂಡಿದ್ದರು. ಬೈಕ್ ರಿಪೇರಿಯಾದ ಬಳಿಕ ಗ್ಯಾರೇಜ್ ಮಾಲಕ 400 ರೂಪಾಯಿ ರಿಪೇರಿಯ ಹಣವನ್ನು ಕೇಳಿದ್ದರು. ಆದರೆ ಆರೋಪಿಗಳು 250 ರೂಪಾಯಿ ಕೊಡುತ್ತೇವೆ, ಉಳಿದಿದ್ದನ್ನು ನಾಳೆ ಕೊಡುತ್ತೇವೆ ಎಂದು ಹೇಳಿದ್ದರು. ಗ್ಯಾರೇಜ್ ಮಾಲಕ ಕೇಶವ ಅವರು ಅದಕ್ಕೆ ಒಪ್ಪದಿದ್ದಾಗ ಕೈಯ್ಯಲ್ಲಿ, ಹೊಡೆದು ಇಂಜಿನ್ ಕೇಸ್‌ನಿಂದ ಹೊಡೆದು ಜೀವ ಬೆದರಿಕೆಯೊಡ್ಡಿ ಪರಾರಿಯಾಗಿದ್ದಾರೆ.

ಈ ಬಗ್ಗೆ ಕೇಶವ ಅವರು ನೀಡಿರುವ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next