Advertisement

ಬಿಹಾರ ಗಡಿಯಲ್ಲಿ ಭಾರತೀಯ ನಾಗರಿಕರ ಮೇಲೆ ನೇಪಾಳಿ ಪೊಳೀಸರ ಗುಂಡಿನ ದಾಳಿ

01:49 PM Jul 20, 2020 | keerthan |

ಪಾಟ್ನಾ: ನೆರೆ ರಾಷ್ಟ್ರ ನೇಪಾಳದ ಗಡಿ ತಂಟೆ ಮತ್ತೆ ಮುಂದುವರಿದಿದೆ. ಬಿಹಾರ ರಾಜ್ಯದ ಕಿಶನ್ ಗಂಜ್ ಗಡಿಭಾಗದಲ್ಲಿ ನೇಪಾಳ ಪೊಳೀಸರು ಭಾರತೀಯ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಓರ್ವ ಭಾರತೀಯ ಗಾಯಗೊಂಡಿದ್ದಾನೆ.

Advertisement

ಭಾರತೀಯ ಭೂಭಾಗವನ್ನು ತನ್ನದೆಂದು ಹೇಳಿಕೊಂಡು ನಕ್ಷೆ ರಚಿಸಿ ಗಡಿ ತಂಟೆ ಆರಂಭಿಸಿರುವ ನೇಪಾಳ, ಭಾರತೀಯರ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ಮತ್ತೊಂದು ಕಿರಿಕ್ ಆರಂಭಿಸಿದೆ. ಇದು ಒಂದು ತಿಂಗಳ ಅಂತರದಲ್ಲಿ ನಡೆದ ಎರಡನೇ ಗುಂಡಿನ ದಾಳಿ. ಕಳೆದ ಬಾರಿ ಸೀತಾಮಡಿ ಎಂಬ ಪ್ರದೇಶದಲ್ಲಿ ನೇಪಾಳ ಪೊಲೀಸರ ದಾಳಿಗೆ ಓರ್ವ ಭಾರತೀಯ ಬಲಿಯಾಗಿದ್ದರು. ಇಬ್ಬರು ಗಾಯಗೊಂಡಿದ್ದರು.

ರವಿವಾರ ಕಿಶನ್ ಗಂಜ್ ಬಡಿ ಪ್ರದೇಶದಲ್ಲಿ ಮೂವರು ಭಾರತೀಯರ ಮೇಲೆ ನೇಪಾಳಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ ಇಬ್ಬರು ತಪ್ಪಿಸಿಕೊಂಡಿದ್ದು, ಓರ್ವ ಗಾಯಗೊಂಡಿದ್ದಾರೆ. ಕಿಶನ್ ಗಂಜ್ ಪೊಲೀಸ್ ವರಿಷ್ಠಾಧಿಕಾರಿ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next