Advertisement

Atrocity Case; ಹವಾ ಮಲ್ಲಿನಾಥ್ ಸ್ಚಾಮೀಜಿಯ ಬಂಧನ

05:55 PM Feb 19, 2024 | Team Udayavani |

ಕಲಬುರಗಿ: ದೌರ್ಜನ್ಯ ಪ್ರಕರಣದಲ್ಲಿ ಜೈ ಭಾರತ್ ಮಾತಾ ಸೇವಾ ಸಮಿತಿಯ ಹವಾ ಮಲ್ಲಿನಾಥ್ ಸ್ಚಾಮೀಜಿಯ ಬಂಧನವಾಗಿದೆ. ಕಲಬುರಗಿಯ ನಗರದ ಎಮ್ ಬಿ ನಗರ ಪೊಲೀಸರು ಬಂಧಿಸಿದ್ದಾರೆ.

Advertisement

ದೌರ್ಜನ್ಯ ಪ್ರಕರಣ ಸಂಬಂಧ ನ್ಯಾಯಲಯಕ್ಕೆ ಹಾಜಾರಾಗದ ಹವಾ ಮಲ್ಲಿನಾಥ್ ವಿರುದ್ಧ ವಾರೆಂಟ್ ಜಾರಿ ಮಾಡಲಾಗಿತ್ತು. ಕಲಬುರಗಿಯ ಎರಡನೇ ಹೆಚ್ಚುವರಿ ನ್ಯಾಯಲಯದಿಂದ ವಾರೆಂಟ್ ಜಾರಿ ಮಾಡಲಾಗಿತ್ತು.

ವಾರೆಂಟ್ ಜಾರಿ ಹಿನ್ನೆಲೆಯಲ್ಲಿ ಹವಾ ಮಲ್ಲಿನಾಥ್ ಸ್ವಾಮೀಜಿ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ. ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

2017 ರಲ್ಲಿ ಮಹಾನಂದ ಅನ್ನೋ ಪ್ರಕಾಶ್ ಸ್ವಾಮೀಜಿ ಮದುವೆಯಾಗಿತ್ತು. ಪ್ರಕಾಶ್ ಮದುವೆಯಾದ ಬಳಿಕ ಯುವತಿಗೆ ವಂಚನೆ ಮಾಡಿದ್ದ. ವಂಚನೆ ಮಾಡಿದ ಹಿನ್ನೆಲೆಯಲ್ಲಿ ಪ್ರಕಾಶ್ ಸ್ವಾಮೀಜಿ, ಹವಾ ಮಲ್ಲಿನಾಥ್ ಸ್ವಾಮೀಜಿ ಮೇಲೆ ದೂರು ದಾಖಲಾಗಿತ್ತು. ಪ್ರಕರಣ ಸಂಬಂಧ ನ್ಯಾಯಲಯದ ಮುಂದೆ ಸ್ವಾಮೀಜಿ ಹಾಜಾರಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next