Advertisement

ಅಥಣಿ ಜನತೆ ಜಾಗೃತರಾಗಿರಿ: ಸವದಿ

05:10 PM Apr 26, 2020 | Suhan S |

ಅಥಣಿ: ನಮ್ಮ ಅಥಣಿ ತಾಲೂಕು ಜನರು ಜಾಗ್ರತರಾಗಿರಬೇಕು. ಇಲ್ಲಿಯವರು ಹೊರಗೆ ಹೊಗಬೇಡಿ. ಹೊರಗಿನವರು ಯಾರಾದರೂ ಬಂದರೆ ತಕ್ಷಣ ತಾಲೂಕು ಆಡಳಿತಕ್ಕೆ ತಿಳಿಸಬೇಕೆಂದು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾಧ್ಯಮದ ಮೂಲಕ ಜನರಿಗೆ ಕೇಳಿಕೊಂಡಿದ್ದಾರೆ.

Advertisement

ಇಂದು ಆರೋಗ್ಯ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಾಲೂಕು ಪಕ್ಕದಲ್ಲಿ ಮಹಾರಾಷ್ಟ್ರ ಇದೆ. ಅದರಂತೆ ರಾಯಭಾಗ ತಾಲೂಕು, ವಿಜಯಪೂರ, ಬಾಗಲಕೋಟಿ ಜಿಲ್ಲೆ ಎಲ್ಲ ಸೀಮೆಗಳು ತಮ್ಮ ತಾಲೂಕಿಗೆ ಹತ್ತಿರ ಇವೆ. ಅಲ್ಲೆಲ್ಲ  ಕೋವಿಡ್ 19 ಸೋಂಕಿತರು ಇರುವದರಿಂದ ನಾವು ಜಾಗೃತರಾಗಿರಬೇಕಿದೆ. ಸುದೈವದಿಂದ ನಮ್ಮ ತಾಲೂಕಿನಲ್ಲಿ ಒಂದೂ ಕೋವಿಡ್ 19  ಸೋಂಕಿತರಿಲ್ಲ. ಈ ಪರಿಸ್ಥಿತಿ ಹೀಗೆಯೇ ಮುಂದುವರಿಯಬೇಕಾದರೆ ಸಾಮಾಜಿಕ ಅಂತರ ಕಾಯ್ದಕೊಳ್ಳಬೇಕು. ಸರಕಾರ ಮಾಡುವ ಕೆಲಸಕ್ಕೆ ಜನರು ಕೈಜೊಡಿಸಬೇಕು ಎಂದು ಹೇಳಿದರು.

ಸಂಚಾರಿ ದವಾಖಾನೆ ಉದ್ಘಾಟನೆ: ಸಾರಿಗೆ ಇಲಾಖೆಯಿಂದ 4 ಸಂಚಾರಿ ದವಾಖಾನೆ ಆರಂಭಿಸಲಾಗಿದೆ. ಸೀಲ್‌ ಡೌನ್‌, ಲಾಕ್‌ ಡೌನ್‌ ಪ್ರದೇಶಗಳಲ್ಲಿ ಉತ್ತಮ ವೈದ್ಯಕೀಯ ಸೇವೆ ಒದಗಿಸಲು ಸಂಚಾರಿ ದವಾಖಾನೆ ಕೆಲಸ ಮಾಡುತ್ತದೆ. ಅವಶ್ಯ ಬಿದ್ದರೆ ಇನ್ನೂ ಹೆಚ್ಚು ಸಂಚಾರಿ ದವಾಖಾನೆ ಆರಂಭಿಸಲಾಗುವುದು ಎಂದು ಹೇಳಿದರು.

ಲಾಕಡೌನ್ ತೆರವು: ಸರಕಾರ ಮಾಡಿರುವ ಈಗಿನ ಸಡಲಿಕೆ ರೇಡ್‌ ಝೋನ್‌, ಸೀಲ್‌ ಡೌನ್‌ ಏರಿಯಾ, ಬಫರ್‌ ಜೋನ್‌ಗಳಿಗೆ ಅನ್ವಯವಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next