Advertisement

Caste census; ಎಷ್ಟು ಮಂದಿ ದಲಿತರಿದ್ದೀರಿ?:ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರಿಗೆ ರಾಹುಲ್

08:23 PM Oct 09, 2023 | Team Udayavani |

ಹೊಸದಿಲ್ಲಿ: ರಾಷ್ಟ್ರವ್ಯಾಪಿ ಜಾತಿ ಗಣತಿಯ ಕಲ್ಪನೆಯನ್ನು ಬೆಂಬಲಿಸಲು ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯು(CWC) ಸರ್ವಾನುಮತದಿಂದ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ, ಇದು ಬಡವರ ವಿಮೋಚನೆಗೆ ಶಕ್ತಿಯುತ ಹೆಜ್ಜೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಪಾದಿಸಿದರು

Advertisement

ಸೋಮವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ದುರ್ಬಲ ವರ್ಗದ ಜನರು ದೇಶದ ಆಸ್ತಿ ಮತ್ತು ಸಂಸ್ಥೆಗಳಲ್ಲಿ ತಮ್ಮ ಪಾಲು ಪಡೆಯುತ್ತಿಲ್ಲ ಎಂದರು. ಮಾತ್ರವಲ್ಲದೆ ಇಲ್ಲಿ ಎಷ್ಟು ಮಂದಿ ದಲಿತರು ಮತ್ತು ಒಬಿಸಿಗಳು ಇದ್ದೀರಿ ಎಂದು ಪ್ರಶ್ನಿಸಿ ಪತ್ರಿಕಾಗೋಷ್ಠಿಯಲ್ಲಿದ್ದ ಪತ್ರಕರ್ತರಿಗೆ ಕೈ ಎತ್ತಲು ಹೇಳಿದರು.

ದೇಶದ ಆಸ್ತಿ ಮತ್ತು ಸಂಸ್ಥೆಗಳಲ್ಲಿ ಸಂಸ್ಥೆಗಳಲ್ಲಿ ಎಷ್ಟು ದಲಿತರು, ಬುಡಕಟ್ಟು ಜನಾಂಗದವರು ಮತ್ತು OBC ಗಳು ಇದ್ದಾರೆ, ಅವರ ಸಂಪತ್ತು ಏನು, ಆಸ್ತಿಯಲ್ಲಿ ಪಾಲು ಮತ್ತು ಅವರ ಜನಸಂಖ್ಯೆ ಎಷ್ಟು ಎಂಬುದು ಪ್ರಶ್ನೆಯಾಗಿದೆ ಎಂದರು.

ಜಾತಿ ಗಣತಿ ಬೇಡಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಟೀಕೆಗಳ ವಿರುದ್ಧ ಆಕ್ರೋಶ ಹೊರ ಹಾಕಿ “ದೇಶದಲ್ಲಿ ಎಷ್ಟು ಬಡವರು ಇದ್ದಾರೆ ಎಂದು ನಾವು ಕೇಳುತ್ತಿದ್ದೇವೆ. ಆದ್ದರಿಂದ ಬಿಜೆಪಿ ಟೀಕೆ ಕೇವಲ ಗೊಂದಲ ಹುಟ್ಟಿಸಲು ಮಾತ್ರ ಎಂದರು.

ಸಿಎಂ ಸಿದ್ದರಾಮಯ್ಯ ಸೇರಿ ನಾಲ್ಕು ರಾಜ್ಯಗಳ ಕಾಂಗ್ರೆಸ್ ಮುಖ್ಯಮಂತ್ರಿಗಳ ಜತೆಗಿದ್ದ ರಾಹುಲ್ ಗಾಂಧಿ, ಜಾತಿ ಜನಗಣತಿಯನ್ನು ಬೆಂಬಲಿಸುವ CWC ನಿರ್ಧಾರವು ಬಡ ಜನರ ವಿಮೋಚನೆಗಾಗಿ “ಅತ್ಯಂತ ಪ್ರಗತಿಪರ” ಮತ್ತು “ಶಕ್ತಿಯುತ” ಹೆಜ್ಜೆಯಾಗಿದೆ. ದೇಶದಲ್ಲಿ ಹೊಸ ಮಾದರಿ ಮತ್ತು ಅಭಿವೃದ್ಧಿಗೆ ಈ ‘ಎಕ್ಸ್-ರೇ’ ಅಗತ್ಯವಿದೆ ಎಂದರು.

Advertisement

4 ಕಾಂಗ್ರೆಸ್ ಮುಖ್ಯಮಂತ್ರಿಗಳ ಪೈಕಿ 3 ಮುಖ್ಯಮಂತ್ರಿಗಳು ಒಬಿಸಿಯವರು. ಬಿಜೆಪಿಯ 10 ಮುಖ್ಯಮಂತ್ರಿಗಳ ಪೈಕಿ 1 ಮುಖ್ಯಮಂತ್ರಿ ಒಬಿಸಿ ಆಗಿದ್ದು, ಕೆಲ ದಿನಗಳ ನಂತರ ಅವರೂ ಮುಖ್ಯಮಂತ್ರಿಯಾಗಿರುವುದಿಲ್ಲ.ಪ್ರಧಾನಿ ಮೋದಿ ಒಬಿಸಿಗಾಗಿ ಕೆಲಸ ಮಾಡುವುದಿಲ್ಲ, ಅವರು ಒಬಿಸಿ ವರ್ಗದ ಗಮನವನ್ನು ಬೇರೆಡೆಗೆ ತಿರುಗಿಸುತ್ತಾರೆ ಎಂದು ರಾಹುಲ್ ಆರೋಪಿಸಿದರು.

ಜಾತಿ ಗಣತಿ ವರದಿ ಖಂಡಿತ ಪ್ರಕಟಿಸುತ್ತೇವೆ

2014-15 ರಲ್ಲಿ, ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಜಾತಿ ಗಣತಿ ಮತ್ತು ಎಲ್ಲಾ ಸಮುದಾಯಗಳ ಸಾಮಾಜಿಕ-ಆರ್ಥಿಕ ಸಮೀಕ್ಷೆಯನ್ನು ನಡೆಸುವ ಜವಾಬ್ದಾರಿಯನ್ನು ವಹಿಸಲಾಯಿತು. ನಮ್ಮ ಸರ್ಕಾರದ ಅವಧಿ ಮುಗಿಯುವ ಹೊತ್ತಿಗೆ ವರದಿ ಸಿದ್ಧವಾಗಿರಲಿಲ್ಲ. ಈಗ ಕಾಯಂ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ವರದಿ ಸಲ್ಲಿಸುವಂತೆ ಮನವಿ ಮಾಡಿದ್ದೇವೆ. ಅದನ್ನು ಕಾಂಗ್ರೆಸ್ ಸರ್ಕಾರ ಖಂಡಿತ ಪ್ರಕಟಿಸುತ್ತದೆ ಎಂದು ಸಭೆಯಲ್ಲಿ ಹಾಜರಿದ್ದ ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next