Advertisement

ಕಾರ್ಮಿಕರಿಗೆ ಕನಿಷ್ಠ 36 ಸಾವಿರ ರೂ. ವೇತನಕ್ಕೆ ಆಗ್ರಹ

05:45 PM Oct 09, 2022 | Team Udayavani |

ಹಾಸನ: ಎಲ್ಲ ಕಾರ್ಮಿಕರಿಗೂ ಮಾಸಿಕ ಕನಿಷ್ಠ 36 ಸಾವಿರ ರೂ. ವೇತನ ನೀಡಬೇಕು, ಕಾರ್ಮಿಕ ವಿರೋಧಿ ಸಂಹಿತ್ನು ವಾಪಸ್‌ ಪಡೆಯಬೇಕು ಎಂದು ಸಿಐಟಿಯು ಹಾಸನ 6ನೇ ಜಿಲ್ಲಾ ಸಮ್ಮೇಳನ ಆಗ್ರಹಿಸಿದೆ.

Advertisement

ನಗರದ ಸಂಸ್ಕೃತ ಭವನದ ಮಾರುತಿ ಮಾನ್ಪಡೆ ವೇದಿಕೆ ಯಲ್ಲಿ ಶನಿವಾರ ನಡೆದ ಸಿಐಟಿಯು ಹಾಸನ 6ನೇ ಜಿಲ್ಲಾ ಸಮ್ಮೇಳನದಲ್ಲಿ ಈ ನಿರ್ಣಯ ಅಂಗೀಕರಿಸಲಾಗಿದೆ.

ಸುಪ್ರೀಂ ಕೋರ್ಟ್‌ ನ ಆದೇಶ, ಕಾರ್ಮಿಕ ಸಮಾವೇಶಗಳು ಮತ್ತು ವಿಶ್ವಸಂಸ್ಥೆಯ ಜೀನವ ನಿರ್ವಹಣೆ ಸೂಚ್ಯಂಕದ ಆಧಾರದಲ್ಲಿ ಎಲ್ಲ ಕಾರ್ಮಿಕರಿಗೂ ಕನಿಷ್ಠ ವೇತನ 36 ಸಾವಿರ ರೂ.ನಿಗದಿ ಗೊಳಿಸಬೇಕು, ಕೇಂದ್ರ ಸರ್ಕಾರ ಅಂಗೀಕರಿಸಿರುವ ಕಾರ್ಮಿಕ ಸಂಹಿತೆಗಳು ಕಾರ್ಮಿಕ ವಿರೋಧಿಯಾಗಿದ್ದು, ಕಾರ್ಮಿಕರನ್ನು ಇನ್ನೂ ಹೆಚ್ಚು ಶೋಷಣೆ ಮಾಡಲು ಮಾಲೀಕರಿಗೆ ಅವಕಾಶ ನೀಡುವಂತೆ ಇರುವುದರಿಂದ ಕಾರ್ಮಿಕ ಸಂಹಿತೆಗಳನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಲಾಗಿದೆ.

ಎಲ್ಲರಿಗೂ ಮನೆ, ನಿವೇಶನ ನೀಡಿ: ದೇಶವನ್ನು ವೈಜ್ಞಾನಿಕ ಮುನ್ನಡೆಯಿಂದ ವಿಮುಖಗೊಳಿಸುವ ನೂತನ ಶಿಕ್ಷಣ ನೀತಿ ಹಿಂಪಡೆಯಬೇಕು. ಎಲ್ಲರಿಗೂ ವಸತಿ, ಮನೆ ನಿವೇಶನ ನೀಡ ಬೇಕು, ಗುತ್ತಿಗೆ ಮತ್ತು ಇತರೆ ಕಾಯಂಯೇತರ ಕಾರ್ಮಿಕರ ಕಾಯಂ ಮಾಡಲು ಶಾಸನ ರಚಿಸುವುದು ಮತ್ತು ಅಸಂಘ ಟಿತ ಕಾರ್ಮಿಕರಿಗೆ ಭವಿಷ್ಯ ನಿಧಿ ಮತ್ತು ಪಿಂಚಣಿ ನೀಡುವ ಶಾಸನ ರಚಿಸಬೇಕು ಎಂದು ಸಮ್ಮೇಳನ ನಿರ್ಣಯ ಅಂಗೀಕರಿಸಿದೆ.

ಕಾರ್ಮಿಕರ ಹಿತ ಕಡೆಗಣನೆ: ಇದಕ್ಕೂ ಮೊದಲು ಮಾತ ನಾಡಿದ ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್‌.ವರ ಲಕ್ಷ್ಮೀ, ಕಾರ್ಮಿಕರ ಹಿತ ಕಾಯುವುದು ಕೇಂದ್ರ ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ. ಆದರೆ, ಮನಸ್ಸಿಗೆ ಬಂದಂತೆ ಕಾನೂನು ಜಾರಿಗೊಳಿಸುವ ಮೂಲಕ ಕಾರ್ಮಿಕ ವರ್ಗವನ್ನು ಬೀದಿಗೆ ತಳ್ಳಲು ಕೇಂದ್ರ ಸರಕಾರ ಹುನ್ನಾರ ನಡೆಸಿದೆ ಎಂದು ದೂರಿದರು.

Advertisement

ಗಂಭೀರ ಸಮಸ್ಯೆಗಳು ಎದುರಾಗಲಿದೆ: ಕಾರ್ಮಿಕರು ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರರಿದರೆ ಮುಂಬರುವ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಕಾರ್ಮಿಕರ ಕಾನೂನು ಮಾಲಿಕರ ಪರ ತಿದ್ದುವ ಕ್ರಮ, ಕಾರ್ಮಿಕರ ವಿಮಾ ಯೋಜನೆ ಕಾರ್ಮಿಕ ರಿಂದ ಕಸಿಯುವ ಪ್ರಯತ್ನ, ಪಿಎಫ್ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು, ಸಾಮಾಜಿಕ ವೆಚ್ಚಗಳ ಕಡಿತ, ಐಸಿಡಿಎಸ್‌ ನೀಡುತ್ತಿರುವ ಅನುದಾನ ಕಡಿತ, ಬಿಸಿಯೂಟ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ವೆಚ್ಚಗಳ ಕಡಿತ ಹಾಗೂ ಭೂಸ್ವಾಧಿನ ಕಾಯಿದೆ ಕಾರ್ಮಿಕರಿಗೆ ಮಾರಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು..

ಸಿಐಟಿಯು ಜಿಲ್ಲಾ ಅಧ್ಯಕ್ಷ ಧರ್ಮೇಶ್‌ ಮಾತನಾಡಿ, ಕಡಿಮೆ ವೇತನಕ್ಕೆ ಕಾರ್ಮಿಕರಿಂದ ದುಡಿಸಿಕೊಳ್ಳಲಾಗುತ್ತಿದೆ. ಈಗ ನೀಡುತ್ತಿರುವ ವೇತನ ಕಾರ್ಮಿಕರಿಗೆ ಯಾವುದಕ್ಕೂ ಸಾಲುತ್ತಿಲ್ಲ. 1994ರ ನಂತರ ನೇಮಕಗೊಂಡ ಎಲ್ಲ ನೌಕರರನ್ನು ಅನುಮೋದನೆಗೊಳಿಸಿ ಕಾಯಂ ಗೊಳಿಸಬೇಕು. ಸಮರ್ಪಕ ವೇತನ ನೀಡುತ್ತಿಲ್ಲ. ಕನಿಷ್ಟ ವೇತನ ಎಲ್ಲರಿಗೂ ಪಾವತಿಸಬೇಕು. ಬಾಕಿ ಉಳಿಸಿಕೊಂಡ ಪಿಡಿಒಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನೂತನ ಸಮಿತಿ ರಚನೆ: ಸಿಐಟಿಯುವಿನ ಹಾಸನ ಜಿಲ್ಲಾ 6ನೇ ಸಮ್ಮೇಳನದಲ್ಲಿ 23 ಮಂದಿ ಪದಾಧಿಕಾರಿಗಳನ್ನೊಳಗೊಂಡ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆಮಾಡಲಾಯಿತು. ನೂತನ ಸಮಿತಿ ಗೌರವಾಧ್ಯಕ್ಷರಾಗಿ ವಿ.ಸುಕುಮಾರ್‌, ಧರ್ಮೇಶ್‌, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಬಿ.ಪುಷ್ಪ, ಖಜಾಂಚಿಯಾಗಿ ಜಿ.ಪಿ.ಸತ್ಯನಾರಾಯಣ ಪುನಾರಾಯ್ಕೆ ಆದರು. ಏಳು ಜನ ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿ ಗಳು, ಸಿಐಟಿಯುವಿನಡಿ ಸಂಘಟಿತರಾಗಿರುವ ಎಲ್ಲಾ ಸಂಘಟನೆಗಳ ತಾಲೂಕು ಅಧ್ಯಕ್ಷರು ಕಾರ್ಯದರ್ಶಿಗಳನ್ನೊಳಗೊಂಡ ಜಿಲ್ಲಾ ಸಮಿತಿ ಆಯ್ಕೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next