Advertisement

ಪೋಷಕರಿಲ್ಲದ ಮಕ್ಕಳ ಕುಟುಂಬಕ್ಕೆ ನೆರವು 

03:34 PM Jul 10, 2021 | Team Udayavani |

ಬಾಳೆಹೊನ್ನೂರು: ಮಾಗುಂಡಿ ಗ್ರಾಪಂ ವ್ಯಾಪ್ತಿಯ ಮಹಲ್ಗೋಡು ಗ್ರಾಮದಲ್ಲಿ ತಂದೆ- ತಾಯಿ ಇಲ್ಲದೆ ಅನಾಥರಾದ ಮೂವರು ಮಕ್ಕಳ ಕುಟುಂಬಕ್ಕೆ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಭೇಟಿ ನೀಡಿ ಮಕ್ಕಳೊಂದಿಗೆ ಮಾತುಕತೆ ನಡೆಸಿ ಆತ್ಮಸ್ಥೈರ್ಯ ತುಂಬಿ ಅಗತ್ಯ ವಸ್ತುಗಳ ನೆರವು ನೀಡಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 8 ವರ್ಷಗಳ ಹಿಂದೆ ಈ ಅನಾಥಮಕ್ಕಳು ತಂದೆಯನ್ನು ಕಳೆದುಕೊಂಡಿದ್ದೂ ಅಲ್ಲದೆ ತಾಯಿಯೂ ಸಹ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಕುಟುಂಬದ ನಿಶ್ಮಿತಾಳು ಎಸ್‌.ಎಸ್‌. ಎಲ್‌.ಸಿ ವಿದ್ಯಾಬ್ಯಾಸ ಒದುತ್ತಿದ್ದುದನ್ನು ನಿಲ್ಲಿಸಿ ತನ್ನ ಸಹೋದರರಾದ ನಿಖೀತ್‌ ಮತ್ತು ನಿಶಾಂತ್‌ಇವರನ್ನು ಸ್ವತಃ ತಾನೇ ದುಡಿದು ಸಾಕುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ವಸ್ತುಗಳ ನೆರವು ನೀಡಲಾಗಿದೆ. ಅಲ್ಲದೆ ಈ ಅನಾಥ ಮಕ್ಕಳ ವಿದ್ಯಾಭ್ಯಾಸ ಮುಂದುವರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್‌ ಮುಖಂಡ ಟಿ.ಎಂ. ನಾಗೇಶ್‌, ಹೋಬಳಿ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಹನೀಫ್‌, ವಿಕ್ಟರ್‌ ಲೋಬೋ, ಜಿಪಂ ಮಾಜಿ ಸದಸ್ಯೆ ಚಂದ್ರಮ್ಮ, ಅಭಿಷೇಕ್‌ ಗೌಡ, ಅಬ್ದುಲ್‌ಲತೀಫ್‌, ವಿಜಯ್‌, ಸೈಯದ್‌ ಆಲ್ಬಿ, ಸಂದೇಶ್‌, ಪಲ್ಲವಿ, ಮಾಗುಂಡಿ ಗ್ರಾಪಂ ಅಧ್ಯಕ್ಷೆ ಪ್ರಮೀಳಾ ಸಿಲ್ವಿಯಾ ಸೆರಾವೋ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next