Advertisement

ಶೇ.14 ಹೆಚ್ಚು ತೆರಿಗೆ ಸಂಗ್ರಹ ಖಾತರಿ

06:40 AM Feb 23, 2018 | Team Udayavani |

ವಿಧಾನಪರಿಷತ್ತು: ಜಿಎಸ್‌ಟಿ ಜಾರಿ ಬಳಿಕ ರಾಜ್ಯ ಸರ್ಕಾರಕ್ಕೆ ಮಾಸಿಕ ವಾಣಿಜ್ಯ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಏರುಪೇರು ಉಂಟಾದರೂ ತೆರಿಗೆ ಆದಾಯದಲ್ಲಿ ಶೇ.14 ಹೆಚ್ಚಳ ಸಾಧಿಸುವ ಖಾತರಿ ಇದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

Advertisement

ಜೆಡಿಎಸ್‌ನ ರಮೇಶ್‌ಬಾಬು ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ನಾಲ್ಕು ವರ್ಷಗಳಿಂದಲೂ ರಾಜಸ್ವ ಸಂಗ್ರಹದಲ್ಲಿ ನಿರಂತರ ಏರಿಕೆ ಕಾಯ್ದುಕೊಳ್ಳಲಾಗಿದೆ.

2013-14ನೇ ಸಾಲಿನಲ್ಲಿ ಶೇ.16 ತೆರಿಗೆ ಆದಾಯ ಹೆಚ್ಚಾಗಿದ್ದರೆ, ನಂತರದ ವರ್ಷಗಳಲ್ಲೂ ಸರಾಸರಿ ಶೇ.14ರಿಂದ ಶೇ.15 ಹೆಚ್ಚಳವಾಗಿದೆ ಎಂದು ತಿಳಿಸಿದರು.

ಜಿಎಸ್‌ಟಿ ಜಾರಿ ಬಳಿಕ ಮಾಸಿಕ ತೆರಿಗೆ ಆದಾಯ ಪ್ರಮಾಣದಲ್ಲಿ ಏರಿಳಿತವಾಗಿರಬಹುದು. ಇದರಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಪ್ರಯತ್ನ ನಡೆದಿದೆ. ಹಾಗಿದ್ದರೂ ಶೇ.14 ಬೆಳವಣಿಗೆ ಸಾಧಿಸುವ ಖಾತರಿ ಇದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next