Advertisement

ಹಾಲು ಉತ್ಪಾದಕರಿಗೆ ಹೆಚ್ಚುವರಿಯಾಗಿ 3 ರೂ.: ಸೋಮಶೇಖರ್‌

09:01 PM Sep 13, 2022 | Team Udayavani |

ಬೆಂಗಳೂರು: ಹಾಲು ಉತ್ಪಾದಕರ ಸಮಸ್ಯೆ ಅರಿತು ಹೆಚ್ಚುವರಿಯಾಗಿ 3 ರೂ. ನೀಡುವ ಕುರಿತು ಕೆಎಂಎಫ್ ವಾರ್ಷಿಕ ಸಭೆಯಲ್ಲಿ ನಿರ್ಧರಿಸಿದ್ದು, ಮುಖ್ಯಮಂತ್ರಿಗಳ ಅನುಮೋದನೆ ಪಡೆದು ಅದನ್ನು ಜಾರಿಗೊಳಿಸಲಾಗುವುದು ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

Advertisement

ವಿಧಾನ ಪರಿಷತ್‌ ಕಲಾಪದಲ್ಲಿ ಕಾಂಗ್ರೆಸ್‌ನ ಎಸ್‌. ರವಿ ಗಮನ ಸೆಳೆಯುವ ಸೂಚನೆ ವೇಳೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಹಾಲು ಉತ್ಪಾದಕರಿಗೆ ಸದ್ಯ ಪ್ರತೀ ಲೀಟರ್‌ಗೆ 37 ರೂ. ನೀಡಲಾಗುತ್ತಿದೆ. ಆದರೆ, ಅದು ಸಾಕಾಗುತ್ತಿಲ್ಲ ಎಂದು ಉತ್ಪಾದಕರು ಬೇಡಿಕೆ ಸಲ್ಲಿಸಿದ್ದರು.

ಹೀಗಾಗಿ ಕೆಎಂಎಫ್ ಗ್ರಾಹಕರಿಂದ ಪ್ರತೀ ಲೀಟರ್‌ ಹಾಲಿಗೆ ಹೆಚ್ಚುವರಿಯಾಗಿ 3 ರೂ. ಸಂಗ್ರಹಿಸಿ, ಅದನ್ನು ಹಾಲು ಉತ್ಪಾದಕರಿಗೆ ನೀಡಲು ನಿರ್ಧಸಿದೆ. ಸರ್ವ ಸಾಧಾರಣ ಸಭೆಯಲ್ಲಿ ತೆಗೆದುಕೊಂಡು ನಿರ್ಣಯದ ಅನುಮೋದನೆಗಾಗಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದ್ದು, ಸಿಎಂ ಅನುಮತಿ ನೀಡಿದ ಅನಂತರ ಹಾಲಿನ ಬೆಲೆ ಹೆಚ್ಚಿಸಿ, ಅದನ್ನು ಉತ್ಪಾದಕರಿಗೆ ನೀಡಲಾಗುವುದು ಎಂದು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next