Advertisement

Assembly; ವಿಧಾನಮಂಡಲದಲ್ಲಿ ಈ ವಾರ ಚರ್ಚೆಯೋ? ಸಮರವೋ?

11:23 PM Dec 10, 2023 | Team Udayavani |

ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಈ ವಾರವಾದರೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಚರ್ಚೆಗೆ ಅವಕಾಶ ಸಿಗುವುದೇ? ವಿಪಕ್ಷದ ಜಂಟಿ ಹೋರಾಟದ ಕಿಚ್ಚು ಸೋಮವಾರದಿಂದ ಹೆಚ್ಚಾಗಲಿದ್ದು, ಇದಕ್ಕೆ ಪೂರಕವಾದ ವಿಚಾರಗಳು ಬಿಜೆಪಿ ಹಾಗೂ ಜೆಡಿಎಸ್‌ ಬತ್ತಳಿಕೆಗೆ ಸೇರಿಕೊಂಡಿವೆ. ಹೀಗಾಗಿ ಸದನ ಮತ್ತೆ ರಣರಂಗವಾಗುವ ಸಾಧ್ಯತೆ ಇದೆ.
ಸೋಮವಾರ ಮೂರು ಮಸೂದೆಗಳ ಚರ್ಚೆಗೆ ಬಿಜೆಪಿ ಈಗಾಗಲೇ ಒಪ್ಪಿಗೆ ನೀಡಿದೆ. ಪ್ರತಿ ದಿನ ಮೂರು ಮಸೂದೆಗಳನ್ನು ಮಂಡಿಸುತ್ತೇವೆ ಎಂದು ಆಡಳಿತ ಪಕ್ಷ ಕಲಾಪ ಸಲಹಾ ಮಂಡಳಿ ಸಭೆಯಲ್ಲಿ ತಿಳಿಸಿದೆ. ಆದರೆ ಉತ್ತರ ಕರ್ನಾಟಕದ ಚರ್ಚೆ ಎಂದಿನಿಂದ ಎಂಬ ಸ್ಪಷ್ಟತೆ ಇಲ್ಲ.

Advertisement

ಬಿಜೆಪಿಯಿಂದ ಮೂರು ಅಸ್ತ್ರ
ಈ ಮಧ್ಯೆ ಬಿಜೆಪಿ ಮೂರು ಪ್ರಬಲ ಅಸ್ತ್ರಗಳನ್ನು ಪ್ರಯೋಗಿಸಲು ನಿರ್ಧರಿಸಿದೆ. ಡಿ.ಕೆ.ಶಿವಕುಮಾರ್‌ ವಿರುದ್ಧದ ಸಿಬಿಐ ಪ್ರಕರಣ ಹಿಂಪಡೆದ ವಿಚಾರವನ್ನು ಮಂಗಳ ವಾರ ಪ್ರಸ್ತಾವಿಸಲು ಬಿಜೆಪಿ ಮುಂದಾಗಿದೆ.

ಸ್ಪೀಕರ್‌ ಬಗ್ಗೆ ಜಮೀರ್‌ ಹೇಳಿಕೆ ಬಗ್ಗೆ ಸೋಮವಾರ ಗದ್ದಲ ಸೃಷ್ಟಿಸುವ ಸಾಧ್ಯತೆ ಇದೆ. ಜತೆಗೆ ಮೈಸೂರು, ಮಂಡ್ಯ ಭಾಗದಲ್ಲಿ ಇತ್ತೀಚೆಗೆ ಪತ್ತೆಯಾದ ಭ್ರೂಣಹತ್ಯೆ ಪ್ರಕರಣ, ವರ್ಗಾವಣೆ ವಿಚಾರದಲ್ಲಿ ಯತೀಂದ್ರ ಅವರ ವೀಡಿಯೋ ವಿಚಾರಗಳನ್ನು ಪ್ರಸ್ತಾವಿಸಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಮುಂದಾಗಿದೆ. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ಅಸಲಿ ಆಟ ಈ ವಾರ ಆರಂಭವಾಗುವುದೆಂದು ಹೇಳಲಾಗುತ್ತಿದೆ.

ಭುಗಿಲೇಳಲಿದೆ ಒಬಿಸಿ ವಿಚಾರ
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯಿಂದ ಸುಮಾರು 50 ಸಾವಿರ ಫಲಾನುಭವಿಗಳಿಗೆ ಹಿಂದಿನ ಬಿಜೆಪಿ ಸರಕಾರದಲ್ಲಿ ನೀಡಿದ್ದ ವಿವಿಧ ಸೌಲಭ್ಯವನ್ನು ಸರಕಾರ ತಡೆಹಿಡಿದಿರುವುದು ಮತ್ತೂಂದು ವಿವಾದ ಸೃಷ್ಟಿಸುವ ಸಾಧ್ಯತೆ ಇದೆ. ಶಾಸಕ ಸುನಿಲ್‌ ಕುಮಾರ್‌ ನೇತೃತ್ವದಲ್ಲಿ ಬಿಜೆಪಿಯ ಹಿಂದುಳಿದ ವರ್ಗದ ಶಾಸಕರು ನಿಯಮ 69 ರಡಿ ಚರ್ಚೆಗೆ ಅವಕಾಶ ಕೋರಿ ಸ್ಪೀಕರ್‌ಗೆ ನೋಟಿಸ್‌ ನೀಡಿದ್ದಾರೆ. ಗಂಗಾ ಕಲ್ಯಾಣ, ಹಿಂದುಳಿದ ವರ್ಗದ ಯುವಕರಿಗೆ ನೀಡಿದ್ದ ಸೌಲ ಸೌಲಭ್ಯ ಸಹಿತ ಸುಮಾರು 50 ಸಾವಿರ ಫಲಾನುಭವಿಗಳ ಆಯ್ಕೆಯನ್ನು ರಾಜ್ಯ ಸರಕಾರ ವಿನಾಕಾರಣ ತಡೆ ಹಿಡಿದಿದೆ ಎಂದು ಬಿಜೆಪಿ ಈ ಹಿಂದೆ ಆರೋಪಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next