Advertisement

Puttur: ಜಮೀನು ವಿವಾದದಲ್ಲಿ ಹಲ್ಲೆ; ಇತ್ತಂಡಗಳ ವಿರುದ್ಧ ದೂರು 

07:34 PM May 30, 2024 | Team Udayavani |

ಪುತ್ತೂರು: ಜಮೀನು ವಿವಾದದಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿ ಇತ್ತಂಡಗಳ ವಿರುದ್ಧ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಕೆದಿಲ ಬಾಯಬೆ ನಿವಾಸಿ ಲೋಕೋಪಯೋಗಿ ಗುತ್ತಿಗೆದಾರ ರಶೀದ್‌ ನೀಡಿರುವ ದೂರಿನಂತೆ, ಪಾಟ್ರಕೋಡಿಯಲ್ಲಿ ಅಲಿ, ಬಿಲಾಲ್‌, ಪಿ.ಕೆ.ಅಬ್ದುಲ್‌ ರಹಿಮಾನ್‌, ಪಿ.ಕೆ.ಹ್ಯಾರೀಸ್‌, ನಾಸೀರ್‌, ಅಫ್ರಿದ್‌ ಅವರು ನನ್ನ ತಂದೆಯ ಜಮೀನಿನಲ್ಲಿದ್ದ ಮರವನ್ನು ಕಡಿದು ಬೇಲಿ ತೆರವು ಮಾಡುತ್ತಿದ್ದರು. ಇದನ್ನು ವಿಚಾರಿಸಿದಾಗ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿರುವುದಾಗಿ ದೂರು ನೀಡಿದ್ದಾರೆ.

ಪಾಟ್ರಕೋಡಿಯ ಹೈದರ್‌ ಪಿ.ಕೆ. ನೀಡಿದ ದೂರಿನಂತೆ, ಪಾಟ್ರಕೋಡಿಯಲ್ಲಿ ನಮಗೆ ಸೇರಿದ ಜಾಗದಲ್ಲಿ ಮನೆ ಕಟ್ಟಲು ಗಿಡಗಳನ್ನು ತೆರವು ಮಾಡುತ್ತಿದ್ದ ವೇಳೆ ಮಹಮ್ಮದ್‌ ರಶೀದ್‌ ಅವಾಚ್ಯ ಶಬ್ದಗಳಿಂದ ನಿಂದಿಸಿ ಅನ್ನತ್‌, ಅಲಿ ಹೈದರ್‌ ಮತ್ತು ಬಿಲಾಲ್‌ ಅವರಿಗೆ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ಫಾರೂಕ್‌ ಹಾಗೂ ಉಸ್ಮಾನ್‌ ಸ್ಥಳಕ್ಕೆ ಬಂದು  ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next