Advertisement

Belthangady ಜಮೀನು ವಿಚಾರದಲ್ಲಿ ಸಂಬಂಧಿಕರಿಂದ ಹಲ್ಲೆ, ಬೆದರಿಕೆ

01:05 AM Sep 05, 2023 | Team Udayavani |

ಬೆಳ್ತಂಗಡಿ: ಸೋಣಂದೂರು ಗ್ರಾಮದ ನಿವಾಸಿ ಸುರೇಶ್‌ ಆಚಾರ್ಯ (43) ಅವರ ಮೇಲೆ ಜಮೀನು ವಿಚಾರವಾಗಿ ಸಂಬಂಧಿಕರೇ ಹಲ್ಲೆ ನಡೆಸಿದ ಘಟನೆ ಸೆ. 3ರಂದು ನಡೆದಿದೆ.

Advertisement

ಸುರೇಶ ಆಚಾರ್ಯ ಅವರು ಮನೆಯಲ್ಲಿ ಚಿನ್ನದ ಕೆಲಸ ಮಾಡುತ್ತಿರುವ ಸಮಯ ಅಕ್ಕನ ಗಂಡ ವಾಮನ ಆಚಾರ್ಯ ಹಾಗೂ ತಂಗಿಯ ಗಂಡ ರವಿ ಆಚಾರ್ಯ ಅವರು ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಜಮೀನಿನ ವಿಚಾರದಲ್ಲಿ ತಕರಾರು ನಡೆಸಿ, ಅವಾಚ್ಯವಾಗಿ ಬೈದು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ.

ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಪುಂಜಾಲಕಟ್ಟೆ ಪೊಲೀಸ್‌ ಠಾಣೆಗೆ ದೂರು ನೀಡಿದಂತೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next