Advertisement

ಅಸ್ಸಾಂ ಎನ್‌ಆರ್‌ಸಿ ಅಂತಿಮ ಕರಡು ಗೊಂದಲ: ಸುಪ್ರೀಂ ತರಾಟೆ

01:34 PM Feb 19, 2019 | udayavani editorial |

ಹೊಸದಿಲ್ಲಿ :  ಅಸ್ಸಾಂ ಎನ್‌ಆರ್‌ಸಿ ಅಂತಿಮ ಕರಡು ವಿಷಯದಲ್ಲಿ ಗೊಂದಲ ಸೃಷ್ಟಿಸಿರುವುದಕ್ಕಾಗಿ ಸುಪ್ರೀಂ ಕೋರ್ಟ್‌ ಇಂದು ಮಂಗಳವಾರ ಅಸ್ಸಾಂ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತು.

Advertisement

ಅಂತಿಮ ಕರಡಿನಲ್ಲಿ ಹೆಸರು ಸೇರ್ಪಡೆಯಾಗದವರನ್ನು ಸೇರಿಸಿಕೊಳ್ಳುವಲ್ಲಿನ ಪುನರ್‌ ವಿಮರ್ಶೆ ಕೆಲಸವನ್ನು ಕೈಗೊಳ್ಳುವಲ್ಲಿ ಅಸ್ಸಾಂ ಸರಕಾರ ವಿಫ‌ಲವಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿತು.

ನೀವು ಈ ರೀತಿಯ ಗೊಂದಲವನ್ನು ಜನರಲ್ಲಿ ಸೃಷ್ಟಿಸುವುದೇ ಆದರೆ ಅವರಿಗೆ ನಿಮ್ಮ ಸರಕಾರದ ಮೇಲೆ ವಿಶ್ವಾಸ ಮೂಡುವುದಾದರೂ ಹೇಗೆ ಎಂದು ಸುಪ್ರೀಂ ಕೋರ್ಟ್‌ ಅಸ್ಸಾಂ ಸರಕಾರವನ್ನು ಪ್ರಶ್ನಿಸಿತು. 

Advertisement

Udayavani is now on Telegram. Click here to join our channel and stay updated with the latest news.

Next