Advertisement

“ಆರೋಪ ಸಾಬೀತುಪಡಿಸಿದ್ರೆ ಹೇಳಿದಂತೆ ಕೇಳುವೆ’

06:20 AM Oct 27, 2017 | |

ಗದಗ: ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ 56 ಲಕ್ಷ ರೂ.ಹಣ ಹಾಗೂ ದುಬಾರಿ ಕಾರು ಪಡೆದಿರುವ ಬಗ್ಗೆ ಶಾಮನೂರು ಶಿವಶಂಕರಪ್ಪನವರು ಮಾಡಿರುವ ಆರೋಪ ಸಾಬೀತು ಪಡಿಸಿದರೆ, ಅವರು ಹೇಳಿದಂತೆ ಕೇಳುತ್ತೇನೆ. ಇಲ್ಲದಿದ್ದರೆ ಅವರು ಅಖೀಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಸ್ಥಾನ ತೊರೆಯಬೇಕೆಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸವಾಲು ಹಾಕಿದ್ದಾರೆ.

Advertisement

ನಗರದಲ್ಲಿ ಬುಧವಾರ ಮಾತನಾಡಿ, ಈ ರೀತಿ ವೃತಾಆರೋಪ, ಟೀಕೆಗಳಿಗೆ ನಾವು ಜಗ್ಗುವುದಿಲ್ಲ. ನಮ್ಮನ್ನು ಹತ್ಯೆ ಮಾಡಿದರೂ ಸರಿ. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಕೈ ಬಿಡುವುದಿಲ್ಲ. ಇಷ್ಟು ದಿನಗಳ ಕಾಲ ರಾಜಕೀಯ ಎಂಬ ಚಿನ್ನದ ಬಿಸ್ಕಟ್‌ ತೋರಿಸಿ, ನಮ್ಮನ್ನು ಕತ್ತಲೆಯಲ್ಲಿ ಮುಳುಗಿಸಿದ್ದರು. ಈಗ ಜ್ಞಾನದ ಜ್ಯೋತಿ ಬೆಳಗುತ್ತಿದೆ. ಈ ಹೋರಾಟಕ್ಕಾಗಿ ಬಸವರಾಜ  ಹೊರಟ್ಟಿ,
ಎಂ.ಬಿ.ಪಾಟೀಲ, ವಿನಯ ಕುಲಕರ್ಣಿ ಅವರು ತಮ್ಮ ರಾಜಕೀಯ ಭವಿಷ್ಯವನ್ನೇ ಒತ್ತೆಯಿಟ್ಟಿದ್ದಾರೆ ಎಂದರು.

ವೀರಶೈವ-ಲಿಂಗಾಯತ ಎರಡೂ ಸಮಾನಾರ್ಥಕ
ಬೆಂಗಳೂರು:
“ವೀರಶೈವ-ಲಿಂಗಾಯತ ಎರಡೂ ಸಮಾನಾರ್ಥಕವಾಗಿದ್ದು, ಇವರಿಬ್ಬರೂ ಹಿಂದೂಗಳೇ ಆಗಿದ್ದಾರೆ’
ಎಂದು ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಬಸವಣ್ಣನವರು “ವೀರಶೈವ’ದ ಅನ್ವಯಿಕ ವಿಜ್ಞಾನಿ. ಹಿಂದೂಗಳಲ್ಲಿರುವ ಶಿವ, ರುದ್ರಾಕ್ಷಿ,ವಿಭೂತಿ, ದ್ವೆ„ತ, ಅದ್ವೆ„ತ ಪರಿಕಲ್ಪನೆಗಳು ಸೇರಿ ಬಹುತೇಕ ಎಲ್ಲ ಪದ್ಧತಿಗಳೂ ವೀರಶೈವದಲ್ಲಿವೆ. ಹಾಗಾಗಿ, ವೀರಶೈವ- ಲಿಂಗಾಯತರು ಹಿಂದೂ ಧರ್ಮದ ಒಂದು ಭಾಗವೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು. 
ಇಷ್ಟಲಿಂಗವು ಮೇಲ್ನೋಟಕ್ಕೆ ಗೋಳಾಕಾರವಾಗಿದ್ದರೂ ಅದು ಕಂತೆ ಬಿಗಿದ ಸ್ಥಾವರ ಲಿಂಗದ ಸಂಕ್ಷಿಪ್ತ ರೂಪ. ಆ ಸಂಕ್ಷಿಪ್ತ ರೂಪವನ್ನು “ಪುಟ್ಟಲಿಂಗ’ ಎಂದೂ ಕರೆಯುತ್ತಾರೆ. ಅಲ್ಲದೆ, ಕಳೆದ ಶತಮಾನದಲ್ಲಿ ಕೆಲ ವೀರಶೈವರು ತಮ್ಮನ್ನು “ವೀರಶೈವ ಬ್ರಾಹ್ಮಣರು’ ಎಂದೂ ಕರೆದುಕೊಂಡಿದ್ದಾರೆ.ಅಷ್ಟೇ ಅಲ್ಲ, ಹಲವು ವಚನಗಳಲ್ಲಿ ವೇದಗಳಿಂದ ಉಕ್ತಿಗಳನ್ನು ಬಳಸಿಕೊಂಡ ಉದಾಹರಣೆಗಳಿವೆ ಎಂದು ತಿಳಿಸಿದರು.

ಶಾಮನೂರುಗೆ ಬುದ್ಧಿ ಭ್ರಮಣೆ’
ಬಸವಕಲ್ಯಾಣ:
ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿ ಸತ್ಯ ಮಾಡಲು ಹೊರಟಿರುವ ಭೀಮಣ್ಣ ಖಂಡ್ರೆ, ಶಾಮನೂರು ಶಿವಶಂಕರಪ್ಪ ಮತ್ತು ವೀರಶೈವ ಮಹಾಸಭೆಯ ಕೆಲವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಬಸವ ಧರ್ಮ ಪೀಠದ ಬಸವಪ್ರಭು ಸ್ವಾಮೀಜಿ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವ ಅವರು,ಲಿಂಗಾಯತ ಮಠಾಧೀಶ ರಿಗೆ ಕಾರು,ಹಣದ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿರುವುದು ಸತ್ಯಕ್ಕೆ ದೂರವಾದದ್ದು. ಕೂಡಲೇ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಸ್ವಾಮೀಜಿಗಳಿಗೆ ಭಕ್ತರು ಕಾಣಿಕೆ ರೂಪದಲ್ಲಿ ನೀಡುವ ಹಣ, ವಾಹನಗಳನ್ನು ಪಡೆಯುವುದರಲ್ಲಿ ತಪ್ಪೇನು? ಶಾಮನೂರು ಅವರು ತಮ್ಮ ಹೇಳಿಕೆಗೆ ಬಸವಜಯ ಮೃತ್ಯುಂಜಯ ಸ್ವಾಮಿಗಳವರ ಕ್ಷಮೆ ಕೇಳಬೇಕು. ಅವರಂತಹ ಆಗರ್ಭ ಶ್ರೀಮಂತರಿಗೆ ಮೊಮ್ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಿಲ್ಲ. ಬಡ ಜನರ ನೋವು ಅವರಿಗೆ ತಿಳಿಯದು.
ಶ್ರೀ ನಿಜಗುಣ ಪ್ರಭು
ಸ್ವಾಮೀಜಿ, ಮುಂಡರಗಿ

Advertisement
Advertisement

Udayavani is now on Telegram. Click here to join our channel and stay updated with the latest news.

Next