Advertisement

ಚುನಾವಣಾ ಕರ್ತವ್ಯದಲ್ಲಿದ್ದ ಎಎಸ್‌ಐ ಹೃದಯಾಘಾತದಿಂದ ಸಾವು

07:27 PM Apr 16, 2021 | Team Udayavani |

ಬೆಳಗಾವಿ: ಲೋಕಸಭೆ ಉಪಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಯಮಕನಮರಡಿ ಪೊಲೀಸ್ ಠಾಣೆ ಎಎಸ್‌ಐ ಜೆ.ಬಿ ಪೂಜಾರ(57) ಅವರು ಘಟಪ್ರಭಾ ಮತಗಟ್ಟೆ ಕೇಂದ್ರದಲ್ಲಿ ಹೃದಯಾಘಾತದಿಂದ ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ.

Advertisement

ಉಪಚುನಾವಣಾ ಕರ್ತವ್ಯಕ್ಕೆಂದು ಪೂಜಾರ ಅವರನ್ನು ಗೋಕಾಕ ಮತ ಕ್ಷೇತ್ರದ ಘಟಪ್ರಭಾದ ಮತಗಟ್ಟೆ ಕೇಂದ್ರಕ್ಕೆ ಸೆಕ್ಟರ್ ಅಧಿಕಾರಿಯಾಗಿ ನಿಯೋಜಿಸಲಾಗಿತ್ತು.

ಇದನ್ನೂ ಓದಿ:  ಬಸ್‌ ಗೆ ಕಲ್ಲು ಎಸೆದ ಕಿಡಿಗೇಡಿಗಳು: ಸಾರಿಗೆ ನೌಕರರ ಮುಷ್ಕರಕ್ಕೆ ಚಾಲಕ ಬಲಿ

ಘಟಪ್ರಭಾದ ಎಸ್‌ಬಿಟಿ ಪಿಯು ಕಾಲೇಜಿನ ಶೌಚಾಲಯದ ಆವರಣದಲ್ಲಿ ಎಎಸ್‌ಐ ಜೆ.ಬಿ ಪೂಜಾರ ಅವರು ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಹೋದರ ಚನ್ನರಾಜಗೆ ಕೋವಿಡ್ ಪಾಸಿಟಿವ್

Advertisement
Advertisement

Udayavani is now on Telegram. Click here to join our channel and stay updated with the latest news.

Next