Advertisement

Asia Cup: ಏಷ್ಯಾ ಕಪ್‌ಗೆ ಅಶ್ವಿ‌ನ್‌, ಚಹಲ್‌ ಬೇಕಿತ್ತು- ಭಾರತದ ಮಾಜಿ ಕ್ರಿಕೆಟಿಗರ ಅನಿಸಿಕೆ

11:09 PM Aug 23, 2023 | Team Udayavani |

ಮುಂಬಯಿ: ಭಾರತದ ಏಷ್ಯಾ ಕಪ್‌ ತಂಡದಿಂದ ಪ್ರಮುಖ ಸ್ಪಿನ್ನರ್‌ಗಳಾದ ರವಿಚಂದ್ರನ್‌ ಅಶ್ವಿ‌ನ್‌ ಮತ್ತು ಯಜುವೇಂದ್ರ ಚಹಲ್‌ ಅವರನ್ನು ಕೈಬಿಟ್ಟಿ ದ್ದಕ್ಕೆ ಮಾಜಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. 1983ರ ವಿಶ್ವಕಪ್‌ ವಿಜೇತ ತಂಡದ ಸದಸ್ಯ ಮದನ್‌ಲಾಲ್‌, ಕಪಿಲ್‌ದೇವ್‌ ಅವರ ಬೌಲಿಂಗ್‌ ಜತೆಗಾರನಾಗಿದ್ದ ಕರ್ಸನ್‌ ಘಾವ್ರಿ ಇವರಲ್ಲಿ ಪ್ರಮುಖರು.

Advertisement

“ವಿಶ್ವಕಪ್‌ ಹಿನ್ನೆಲೆಯಲ್ಲಿ ಏಷ್ಯಾ ಕಪ್‌ ಒಂದು ಅಭ್ಯಾಸ ಪಂದ್ಯಾವಳಿಯಾಗಿದೆ. ಎಲ್ಲವೂ ಏಷ್ಯಾದ ಸ್ಪಿನ್‌ ಟ್ರ್ಯಾಕ್‌ನಲ್ಲೇ ನಡೆಯಲಿವೆ. ಹೀಗಾಗಿ ಅನುಭವಿ ಸ್ಪಿನ್ನರ್‌ಗಳಾದ ಅಶ್ವಿ‌ನ್‌ ಮತ್ತು ಚಹಲ್‌ ಅವರನ್ನು ಕಡೆಗಣಿಸಬಾರದಿತ್ತು. ಕುಲದೀಪ್‌ ಎಸೆತಗಳಿಗೆ ಆಸ್ಟ್ರೇಲಿಯನ್ನರು ಚೆನ್ನಾಗಿಯೇ ಉತ್ತರಿಸಿದ್ದಾರೆ. ಚಹಲ್‌ ಓರ್ವ ಮ್ಯಾಚ್‌ ವಿನ್ನಿಂಗ್‌ ಬೌಲರ್‌’ ಎಂಬುದಾಗಿ ಮದನ್‌ಲಾಲ್‌ ಪಿಟಿಐ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

“ಅಶ್ವಿ‌ನ್‌ ಖಾತೆಯಲ್ಲಿ ಈಗಾಗಲೇ 500-600ರಷ್ಟು ವಿಕೆಟ್‌ಗಳಿವೆ. ಅವರಿಗೆ ವಿಕೆಟ್‌ ಹೇಗೆ ಪಡೆಯ ಬೇಕೆಂಬುದು ಗೊತ್ತು. ಅವರನ್ನು ಟೆಸ್ಟ್‌ ವಿಶ್ವಕಪ್‌ ಫೈನಲ್‌ನಿಂದ ಹೊರಗಿರಿಸಲಾಯಿತು. ಪರಿಣಾಮ ಏನಾಯಿತೆಂಬುದು ನಮ್ಮ ತಂಡದ ಆಡಳಿತ ಮಂಡಳಿಗೆ ತಿಳಿದಿರಬಹುದು’ ಎಂದು ಮದನ್‌ಲಾಲ್‌ ತುಸು ಖಾರವಾಗಿ ನುಡಿದರು.
“712 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಅಶ್ವಿ‌ನ್‌ ಇನ್ನೂ ಸಾಧಿಸಿ ತೋರಬೇಕಾದದ್ದು ಏನಿದೆ? ಸೀನಿಯರ್‌ ಆಟಗಾರನಾಗಿಯೂ ಅವರನ್ನು ಸರಿ ಯಾಗಿ ನಡೆಸಿಕೊಳ್ಳಲಿಲ್ಲ. ಅವರೋರ್ವ ಕ್ವಾಲಿಟಿ ಪ್ಲೇಯರ್‌. ಏಷ್ಯಾ ಕಪ್‌ಗೆ ಅವರನ್ನು ಆರಿಸಬೇಕಿತ್ತು. ಭಾರತದ ಟ್ರ್ಯಾಕ್‌ಗಳಲ್ಲಿ ನಡೆಯುವ ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅಶ್ವಿ‌ನ್‌ ಕೀ ಬೌಲರ್‌ ಆಗ ಲಿದ್ದಾರೆ’ ಎಂಬುದು ಕರ್ಸನ್‌ ಘಾವ್ರಿ ಅವರ ಅಭಿಪ್ರಾಯವಾಗಿತ್ತು.

ಫಿಟ್‌ನೆಸ್‌ ಪ್ರಶ್ನಾರ್ಹ
ಏಷ್ಯಾ ಕಪ್‌ಗೆ ಆಯ್ಕೆಯಾದ ಕೆ.ಎಲ್‌. ರಾಹುಲ್‌ ಮತ್ತು ಶ್ರೇಯಸ್‌ ಅಯ್ಯರ್‌ ಅವರ ಫಿಟ್‌ನೆಸ್‌ ಕುರಿತೂ ಮದನ್‌ಲಾಲ್‌ ಪ್ರಶ್ನೆಯನ್ನೆತ್ತಿದರು.
“ಏಷ್ಯಾ ಕಪ್‌ ಮತ್ತು ವಿಶ್ವ ಕಪ್‌ಗ್ಳೆರಡೂ ಪ್ರತಿಷ್ಠಿತ ಪಂದ್ಯಾವಳಿಗಳಾಗಿವೆ. ಇಲ್ಲಿ ಫಿಟ್‌ನೆಸ್‌ ಗುಣ ಮಟ್ಟ ನಿರ್ಣಾಯಕವಾಗಿರುತ್ತದೆ. ನೀವು ದೈಹಿಕವಾಗಿ ಸಮರ್ಥರಾಗದೇ ಇದ್ದಲ್ಲಿ ಮಾನಸಿಕ ವಾಗಿಯೂ ಸಮರ್ಥರಾಗಿರುವು ದಿಲ್ಲ’ ಎಂದು ಮದನ್‌ಲಾಲ್‌ ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next