Advertisement

ಕಾಂಗ್ರೆಸ್‌ ಶಾಸಕರ ಖರೀದಿಗೆ ಯತ್ನ: ಗೆಹ್ಲೋಟ್‌ ಆರೋಪ

11:32 AM Jul 12, 2020 | sudhir |

ಜೈಪುರ: ರಾಜಸ್ಥಾನದಲ್ಲಿ ಕೋವಿಡ್ ನಿಯಂತ್ರಿಸಲು ಕಾಂಗ್ರೆಸ್‌ ಸರಕಾರ ನಿರತವಾಗಿದೆ. ಆದರೆ, ಪ್ರತಿ ಪಕ್ಷ ವಾದ ಬಿಜೆಪಿ, ಸರಕಾರವನ್ನು ಅಸ್ಥಿರಗೊಳಿಸುವಲ್ಲಿ ಸಕ್ರಿಯವಾಗಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ ಕಿಡಿಕಾರಿದ್ದಾರೆ.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್‌ ಶಾಸಕರನ್ನು ಖರೀದಿಸಲು ಬಿಜೆಪಿ 15 ಕೋಟಿ ರೂ. ಆಮಿಷವೊಡ್ಡುತ್ತಿದೆ. ಮುಂಗಡವಾಗಿ 10 ಕೋಟಿ ರೂ. ನೀಡುವುದಾಗಿ ನಂಬಿಸುತ್ತಿದೆ. ಕೆಲ ಶಾಸಕರಿಗೆ ಬೇರೆ ಬೇರೆ ಆಫ‌ರ್‌ಗಳನ್ನು ನೀಡುತ್ತಿದೆ. ಕಳೆದ ಒಂದೂವರೆ ವರ್ಷಗಳಿಂದ ಇದೇ ಕಾರ್ಯದಲ್ಲಿ ಬಿಜೆಪಿ ನಿರತವಾಗಿದೆ. ಅಟಲ್‌ ಬಿಹಾರಿ ವಾಜಪೇಯಿ ಕಾಲದಲ್ಲಿ ಈ ರೀತಿಯ ಕುತಂತ್ರಗಳು ನಡೆಯುತ್ತಿರಲಿಲ್ಲ. 2014ರ ಬಳಿಕ ಇಂತಹ ವಿದ್ಯಮಾನಗಳು ಹೆಚ್ಚಾಗಿವೆ. ಧರ್ಮದ ಆಧಾರದಲ್ಲಿ ಸರಕಾರವನ್ನು ಬೀಳಿಸುವಂತಹ ಕೆಲಸಗಳು ನಡೆಯುತ್ತಿವೆ” ಎಂದು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next