Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಮನವಿ

03:09 PM Jul 16, 2020 | Team Udayavani |

ಕಲಘಟಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಶಿಶು ಅಭಿವೃದ್ಧಿ ಯೋಜನಾ ಧಿಕಾರಿಗಳ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದರು.

Advertisement

ಅಂಗನವಾಡಿ ಕಾರ್ಯಕರ್ತೆಯರು ಕೊರೊನಾ ವಾರಿಯರ್ಸ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ಯಾವುದೇ ರಕ್ಷಣೆ ಇಲ್ಲ. ಪಿಪಿಇ ಕಿಟ್‌, ಮಾಸ್ಕ್, ಕೈಗವಸು ಸೇರಿದಂತೆ ಇನ್ನಿತರೆ ಸುರಕ್ಷತಾ ಪರಿಕರ ಸಮರ್ಪಕವಾಗಿ ನೀಡುತ್ತಿಲ್ಲ. ಕಾರಣ 50 ಲಕ್ಷ ರೂ. ಜೀವವಿಮೆ ಅನ್ವಯಿಸಿ ಕೋವಿಡ್‌-19 ರ ಕರ್ತವ್ಯದಲ್ಲಿರುವ ಕಾರ್ಯಕರ್ತೆಯರಿಗೆ 25 ಸಾವಿರ ರೂ. ಪ್ರೊತ್ಸಾಹಧನ ನೀಡುವಂತೆ ಒತ್ತಾಯಿಸಿದರು. ಇನ್ನಿತರೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.

ಶಂಕ್ರಮ್ಮ ಭೋವಿ, ಶೋಭಾ ಗೌರಿ, ರೇಣುಕಾ ಕಂಪ್ಲಿ ಈ ಸಂದರ್ಭದಲ್ಲಿದ್ದರು. ಸಿಐಟಿಯು ಸಂಘಟನೆಯ ಗೀತಾ ಪಾಟೀಲ, ಕಲ್ಲವ್ವ ಹೂಲಿ, ವಿಜಯಲಕ್ಷ್ಮಿ
ಗಾಣಿಗೇರ, ಕುಸುಮಾ ಛಲವಾದಿ, ಪುಷ್ಪಾ ಯಾದವ, ರಾಜೇಶ್ವರಿ ಗೋನಾಳ, ದ್ರಾಕ್ಷಾಯಿಣಿ ಭಜಂತ್ರಿ, ಶ್ಯಾಮಲಾ ಶಿವಸಿಂಪಗೇರ ಮುಂತಾದವರು
ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next