Advertisement

ಶಿಮ್ಲಾ: ಹೊಟೇಲು, ಕಟ್ಟಡ ಕಾಮಗಾರಿಗೆ ನೀರು ಪೂರೈಕೆ ಬಂದ್‌

05:04 PM May 31, 2018 | Team Udayavani |

ಶಿಮ್ಲಾ : ಪ್ರವಾಸಿಗರ ನಿಸರ್ಗ ಧಾಮ ಎಂದೇ ಪ್ರಸಿದ್ಧವಾಗಿರುವ ಹಿಮಾಚಲ ಪ್ರದೇಶದ ಶಿಮ್ಲಾದಲ್ಲೀಗ ತೀವ್ರ ಜಲಕ್ಷಾಮ ಉಂಟಾಗಿರುವುದರಿಂದ ರಾಜ್ಯದ ಹೈಕೋರ್ಟ್‌ ಹೊಟೇಲುಗಳಿಗೆ ಮತ್ತು ಕಟ್ಟಡ ಕಾಮಗಾರಿಗಳಿಗೆ ನೀರು ಪೂರೈಕೆಯನ್ನು ನಿಲ್ಲಿಸುವಂತೆ ಆದೇಶಿಸಿದೆ. 

Advertisement

ಶಿಮ್ಲಾದಲ್ಲಿ ಕಾರ್‌ ವಾಶ್‌ ಮೇಲೆ ಕೂಡ ಈಗ ನಿಷೇಧ ಹೇರಲಾಗಿದೆ. ಇಲ್ಲಿನ ಸ್ಥಳೀಯರು ಸಾಮಾಜಿಕ ಮಾಧ್ಯಮಗಳಲ್ಲಿ “ಪ್ರವಾಸಿಗರೇ, ಶಿಮ್ಲಾಕ್ಕೆ ಬರಬೇಡಿ, ಇಲ್ಲಿ ನೀರಿಲ್ಲ; ನಿಮ್ಮ ಪ್ರವಾಸಕ್ಕೆ ಬೇರೆ ತಾಣಗಳನ್ನು ಆಯ್ಕೆ ಮಾಡಿ’ ಎಂಬ ಬರಹಗಳನ್ನು ಅಪ್‌ಲೋಡ್‌ ಮಾಡುತ್ತಿದ್ದಾರೆ. 

ಶಿಮ್ಲಾ ಮುನಿಸಿಪಲ್‌ ಕಾರ್ಪೊರೇಶನ್‌ಜನಸಂಖ್ಯೆ 1.72 ಲಕ್ಷ ಇದೆ. ಬೇಸಗೆಯ ಪ್ರವಾಸೀ ಋತುವಿನಲ್ಲಿ ಇದು 90,000 ದಷ್ಟು ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ನಗರದ ನೀರಿನ ಅಗತ್ಯ ದಿನಕ್ಕೆ 4.50 ಲಕ್ಷ ಲೀಟರ್‌ ದಾಟುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next