Advertisement

ಕೇಜ್ರಿವಾಲ್‌ ಮೇಲೆ ಮೆಣಸಿನ ಪುಡಿ ಎರಚಿದ ದಾಳಿಕೋರ ಅರೆಸ್ಟ್‌

04:18 PM Nov 20, 2018 | Team Udayavani |

ಹೊಸದಿಲ್ಲಿ : ದಿಲ್ಲಿ ಮಂತ್ರಾಲಯದೊಳಗೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಮೇಲೆ ಇಂದು ಮಂಗಳವಾರ ಮೆಣಸಿನ ಪುಡಿ ಎರಚಿದ ದಾಳಿಕೋರ ಅನಿಲ ಕುಮಾರ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 

Advertisement

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ದಿಲ್ಲಿ ಸಚಿವಾಲಯ ಕಟ್ಟಡದ ಮೂರನೇ ಮಹಡಿಯಲ್ಲಿರುವ ತಮ್ಮ ಕೊಠಡಿಯಿಂದ ಮಧ್ಯಾಹ್ನ ಊಟಕ್ಕೆಂದು ಹೊರಬಂದ ವೇಳೆ ದಾಳಿಕೋರ ಅನಿಲ್‌ ಕುಮಾರ್‌, ಕೇಜ್ರಿವಾಲ್‌ ಮೇಲೆ ಮೆಣಸಿನಪುಡಿ ಎರಚಿದ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ದಾಳಿಕೋರ ಆರೋಪಿಯನ್ನು ಪೊಲೀಸರು ಇಂದ್ರಪ್ರಸ್ಥ ಎಸ್ಟೇಟ್‌ ಪೊಲೀಸ್‌ ಸ್ಟೇಶನ್‌ಗೆ ಒಯ್ದು ಆತನನ್ನು ಪ್ರಶ್ನಿಸುತ್ತಿದ್ದಾರೆ. ಭದ್ರತಾ ವೈಫ‌ಲ್ಯಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next