Advertisement

ಅರುಣಾಚಲ ಪ್ರದೇಶ : ಸರಕಾರ ರಚನೆಗೆ ಪೆಮಾ ಖಂಡು ಗೆ ರಾಜ್ಯಪಾಲರ ಆಹ್ವಾನ

10:02 AM May 28, 2019 | Sathish malya |

ಇಟಾನಗರ : ಅರುಣಾಚಲ ಪ್ರದೇಶ ರಾಜ್ಯಪಾಲ ಬ್ರಿಗೇಡಿಯರ್‌ (ನಿವೃತ್ತ) ಬಿ ಡಿ ಮಿಶ್ರಾ ಅವರು ರಾಜ್ಯದಲ್ಲಿ ನೂತನ ಸರಕಾರವನ್ನು ರಚಿಸಲು ಇಂದು ಸೋಮವಾರ ಬಿಜೆಪಿ ನಾಯಕ ಮತ್ತು ನಿಯೋಜಿತ ಮುಖ್ಯಮಂತ್ರಿ ಪೆಮಾ ಖಂಡು ಅವರನ್ನು ಆಹ್ವಾನಿಸಿದ್ದಾರೆ.

Advertisement

ಖಂಡು ಅವರು ತಮ್ಮ ಪಕ್ಷಕ್ಕೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ವಿಜಯವನ್ನು ದೊರಕಿಸಿಕೊಟ್ಟಿದ್ದಾರೆ.

ಇದೇ ಮೇ 29ರಂದು ರಾಜ ಭವನದಲ್ಲಿ ನಡೆಯುವ ಶಪಥ ಗ್ರಹಣ ಸಮಾರಂಭದಲ್ಲಿ ರಾಜ್ಯಪಾಲರು ಖಂಡು ಮತ್ತು ಅವರ ಸಂಪುಟ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ನಿರ್ಗಮನ ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡಾ ಮತ್ತು ಇತರರ ಒಡಗೂಡಿ ಖಂಡು ಅವರು ಇಂದು ಬೆಳಗ್ಗೆ ರಾಜ್ಯಪಾಲರನ್ನು ಭೇಟಿಯಾಗಿ ಸರಕಾರ ರಚಿಸುವ ಪ್ರಸ್ತಾವ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next