Advertisement

Mangaluru ಪಾಲಕ್ಕಾಡ್‌ ಡಿಆರ್‌ಎಂ ಆಗಿ ಅರುಣ್‌ ಕುಮಾರ್‌ ಚತುರ್ವೇದಿ ಅಧಿಕಾರ

12:16 AM Sep 16, 2023 | Team Udayavani |

ಮಂಗಳೂರು: ದಕ್ಷಿಣ ರೈಲ್ವೆಯ ಪಾಲಕ್ಕಾಡ್‌ ವಿಭಾಗದ ವಿಭಾಗೀಯ ರೈಲ್ವೇ ಪ್ರಬಂಧಕ (ಡಿಆರ್‌ಎಂ) ಆಗಿ ಅರುಣ್‌ ಕುಮಾರ್‌ ಚತುರ್ವೇದಿ ಅವರು ಗುರುವಾರ ಅಧಿಕಾರ ವಹಿಸಿಕೊಂಡರು.

Advertisement

ಅರುಣ್‌ ಕುಮಾರ್‌ ಅವರು ಈ ಹಿಂದೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸೆಂಟ್ರಲ್‌ ಪಿಡಬ್ಲ್ಯುಡಿಯಲ್ಲಿ ಜಂಟಿ ಕಾರ್ಯದರ್ಶಿ ಮತ್ತು ವಿಜಿಲೆನ್ಸ್‌ ಅಧಿಕಾರಿಯಾಗಿದ್ದರು.

ಇಂಡಿಯನ್‌ ರೈಲ್ವೇ ಸರ್ವಿಸ್‌ ಎಂಜಿನಿಯರ್ (ಐಆರ್‌ಎಸ್‌ಇ)ನ 1993ನೇ ಎಕ್ಸಾಂ ಬ್ಯಾಚ್‌ನ ಅಧಿಕಾರಿಯಾಗಿದ್ದು, ಆಗ್ನೇಯ ರೈಲ್ವೇ, ವಾಯುವ್ಯ ರೈಲ್ವೇ ಆರ್‌ಐಟಿಇಎಸ್‌ನಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next