Advertisement

ರಾಜಕೀಯ ವಾಗ್ಯುದ್ಧಕ್ಕೆ ಸೇನೆಯನ್ನು ಎಳೆಯಬೇಡಿ

08:15 AM Dec 22, 2018 | Team Udayavani |

ಹೊಸದಿಲ್ಲಿ : ರಫೇಲ್‌ ಒಪ್ಪಂದದ ವಿಚಾರದಲ್ಲಿ ವಾಯುಪಡೆ ಮುಖ್ಯಸ್ಥ ಬಿ.ಎಸ್‌.ಧನೋವಾ ಸುಳ್ಳು ಹೇಳುತ್ತಿದ್ದಾರೆ ಎಂದು ಮಾಜಿ ಸಚಿವ ವೀರಪ್ಪ ಮೊಯ್ಲಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಿತ್ತ ಸಚಿವ ಅರುಣ್‌ ಜೇಟ್ಲಿ, ರಾಜಕೀಯ ಕೆಸರೆರಚಾಟಕ್ಕೆ ಸೇನೆಯನ್ನು ಎಳೆಯಬೇಡಿ. ಪ್ರಬುದ್ಧರಾಗಿ ವರ್ತಿಸಿ ಎಂದು ಕಾಂಗ್ರೆಸ್‌ಗೆ ತಾಕೀತು ಮಾಡಿದ್ದಾರೆ. ದಶಕಗಳವರೆಗೆ ಈ ದೇಶವನ್ನು ಆಳಿದ ಪಕ್ಷ ಇನ್ನೂ ಪ್ರಬುದ್ಧವಾಗಬೇಕಿದೆ ಎಂದು ಜೇಟ್ಲಿ ತಮ್ಮ ಬ್ಲಾಗ್‌ನಲ್ಲಿ ಲೇಖನ ಬರೆದಿದ್ದಾರೆ. ರಫೇಲ್‌ ವಿಚಾರಕ್ಕೆ ಸಂಬಂಧಿಸಿ ಭಾರತೀಯ ವಾಯುಪಡೆ ಮತ್ತು ಅದರ ಮುಖ್ಯಸ್ಥರು ಮಾತನಾಡಲು ಅರ್ಹರಾಗಿರುತ್ತಾರೆ. ಯುಪಿಎ ಅಧಿಕಾರದಲ್ಲಿದ್ದಾಗ ರಫೇಲ್‌ ಆಯ್ಕೆಯಲ್ಲಿ ವಾಯುಪಡೆಯೂ ಭಾಗವಹಿಸಿತ್ತು. ಅದೇ ರೀತಿ ಎನ್‌ಡಿಎ ಅಧಿಕಾರದಲ್ಲಿದ್ದಾಲೂ ಸೇನೆ ಭಾಗವಹಿಸಿದೆೆ ಎಂದಿದ್ದಾರೆ.

Advertisement

ರಿಲಯನ್ಸ್‌ ಅನ್ನು ಕೈಬಿಡುತ್ತೇವೆ: ನಾವು ಅಧಿಕಾರಕ್ಕೆ ಬಂದರೆ ರಫೇಲ್‌ ಡೀಲ್‌ನಿಂದ ರಿಲಯನ್ಸ್‌ ಡಿಫೆನ್ಸ್‌ ಅನ್ನು ಕೈಬಿಟ್ಟು, ಎಚ್‌ಎಎಲ್‌ ಅನ್ನು ಆಫ್ಸೆಟ್‌ ಪಾರ್ಟರ್‌ ಆಗಿ ನೇಮಿಸುತ್ತೇವೆ ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next